<p><strong>ಹುಣಸೂರು:</strong> ತಾಲ್ಲೂಕಿನ ಹನಗೋಡು ಹೋಬಳಿ ಹೈರಿಗೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ರೈತ ತಮ್ಮೇಗೌಡ ಅವರಿಗೆ ಸೇರಿದ ಬೀನ್ಸ್ ಮತ್ತು ಅಡಿಕೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ದಿಕ್ಕಾಪಾಲಾಗಿ ಓಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದ ಬಳಿಕ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಫಯಾಜ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಂದಕುಮಾರ್ ಕಾರ್ಯಾಚರಣೆ ನಡೆಸಿದ್ದು, ಹುಲಿಯನ್ನು ರಾತ್ರಿ 7 ಗಂಟೆ ಆಸುಪಾಸಿನಲ್ಲಿ ಮುತ್ತುರಾಯನ ಹೊಸಹಳ್ಳಿ ವಲಯಕ್ಕೆ ಓಡಿಸುವಲ್ಲಿ ಸಫಲರಾದರು.</p><p>‘ಆನೆ ಬಳಸಿ ಹುಲಿ ಬಂಧಿಸುವ ಕಾರ್ಯಾಚರಣೆ ಏ.8ರ ಮಂಗಳವಾರ ಮುಂದುವರೆಯಲಿದೆ. ಈ ಹಿಂದೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಹುಲಿ ಕಾಣಿಸಿತ್ತು, ಅಲ್ಲಿ ಬೋನು ಇಟ್ಟಿದ್ದು ಹುಲಿ ಬಿದ್ದಿರಲಿಲ್ಲ. ಹುಲಿ ಬಂಧಿಸಿ ಅರಣ್ಯದಂಚಿನ ಗ್ರಾಮಸ್ಥರಿಗೆ ನೀಡಲು ರಕ್ಷಣೆ ನೀಡಲು ಇಲಾಖೆ ಬದ್ಧ’ ಎಂದು ಡಿಸಿಎಫ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ತಾಲ್ಲೂಕಿನ ಹನಗೋಡು ಹೋಬಳಿ ಹೈರಿಗೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ರೈತ ತಮ್ಮೇಗೌಡ ಅವರಿಗೆ ಸೇರಿದ ಬೀನ್ಸ್ ಮತ್ತು ಅಡಿಕೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ದಿಕ್ಕಾಪಾಲಾಗಿ ಓಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದ ಬಳಿಕ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಫಯಾಜ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಂದಕುಮಾರ್ ಕಾರ್ಯಾಚರಣೆ ನಡೆಸಿದ್ದು, ಹುಲಿಯನ್ನು ರಾತ್ರಿ 7 ಗಂಟೆ ಆಸುಪಾಸಿನಲ್ಲಿ ಮುತ್ತುರಾಯನ ಹೊಸಹಳ್ಳಿ ವಲಯಕ್ಕೆ ಓಡಿಸುವಲ್ಲಿ ಸಫಲರಾದರು.</p><p>‘ಆನೆ ಬಳಸಿ ಹುಲಿ ಬಂಧಿಸುವ ಕಾರ್ಯಾಚರಣೆ ಏ.8ರ ಮಂಗಳವಾರ ಮುಂದುವರೆಯಲಿದೆ. ಈ ಹಿಂದೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಹುಲಿ ಕಾಣಿಸಿತ್ತು, ಅಲ್ಲಿ ಬೋನು ಇಟ್ಟಿದ್ದು ಹುಲಿ ಬಿದ್ದಿರಲಿಲ್ಲ. ಹುಲಿ ಬಂಧಿಸಿ ಅರಣ್ಯದಂಚಿನ ಗ್ರಾಮಸ್ಥರಿಗೆ ನೀಡಲು ರಕ್ಷಣೆ ನೀಡಲು ಇಲಾಖೆ ಬದ್ಧ’ ಎಂದು ಡಿಸಿಎಫ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>