ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ರಾಯಚೂರು: ಪ್ರಚಾರಕ್ಕೆ ತೊಡಕಾದ ರಣ ಬಿಸಿಲು

ಮುಖಂಡರ ಒತ್ತಡದ ನಡುವೆಯೂ ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಕಾರ್ಯಕರ್ತರು
Published : 22 ಏಪ್ರಿಲ್ 2024, 6:29 IST
Last Updated : 22 ಏಪ್ರಿಲ್ 2024, 6:29 IST
ಫಾಲೋ ಮಾಡಿ
Comments
ತಂಪು ಪಾನೀಯಗಳಿಗೆ ಬೇಡಿಕೆ
ಚುನಾವಣಾ ಪ್ರಚಾರ ಸಭೆಗಳಲ್ಲಿ ತಂಪು ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಕ್ಕೆ ತಂದ ಕೆಲವೇ ಕ್ಷಣಗಳಲ್ಲೇ ಅವು ಖಾಲಿಯಾಗುತ್ತಿವೆ. ಇನ್ನು ಸಭೆ ಸಮಾರಂಭಗಳಲ್ಲಿ ಹೊರಗಡೆ ವ್ಯಾಪಾರ ಮಾಡುವ ಐಸ್‌ಕ್ರೀಮ್ ಎಳನೀರು ಮಜ್ಜಿಗೆಗೆ ಭಾರಿ ಬೇಡಿಕೆ ಇದೆ. ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಎಳನೀರು ಬೆಲೆ ₹ 40ರಿಂದ ₹70ಕ್ಕೆ ಏರಿದೆ. ಹೀಗಾಗಿ ಜನ ಸುರಕ್ಷಿತವಲ್ಲದ ಪ್ಲಾಸ್ಟಿಕ್‌ ವಾಟರ್‌ ಪೌಚ್‌ಗಳಲ್ಲಿನ ನೀರು ಕುಡಿಯಲು ಬಳಸುತ್ತಿದ್ದಾರೆ. ಕೆಲ ಕಡೆ ದಾನಿಗಳು ಮಣ್ಣಿನ ಕೊಡಗಳಲ್ಲಿ ನೀರು ತುಂಬಿ ಇಡುತ್ತಿದ್ದಾರೆ. ಆದರೆ ಅವು ಸಹ ಆಗಾಗ ಖಾಲಿ ಯಾಗುತ್ತಿವೆ. ಜನರಿಗೆ ತಣ್ಣನೆಯ ನೀರು ಸಿಗುತ್ತಿಲ್ಲ. ತಂಪುಪಾನೀಯ ಅಂಗಡಿಗೆ ತೆರಳಿ ತಂಪಾದ ನೀರು ಖರೀದಿಸಿ ಇಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌
ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ ವರೆಗೆ ಇದೆ. ರಾತ್ರಿ ವೇಳೆಯಲ್ಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಮುಂದುವರಿದಿದೆ. ಹಗಲಿನಲ್ಲಿ 9 ಕಿ.ಮೀ ವೇಗದಲ್ಲಿ ಆಗಾಗ ಬಿಸಿಗಾಳಿ ಬೀಸುತ್ತಿದೆ. ಗಾಳಿಯಲ್ಲಿ ದೂಳು ಆವರಿಸಿಕೊಂಡು ಜನರನ್ನು ಹೈರಾಣು ಮಾಡಿದೆ. ಕಲ್ಲು ಬಂಡೆಗಳೇ ತುಂಬಿರುವ ಊರುಗಳಲ್ಲಿ ಉರಿ ಬಿಸಿಲಿಗೆ ಕಾದ ಕಲ್ಲುಗಳು ಸಂಜೆ ನಂತರ ಶಾಖ ಹೊರ ಸೂಸುತ್ತಿವೆ. ಗುಡ್ಡಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಜನರ ನೆಮ್ಮದಿ ಕಸಿದುಕೊಂಡಿದೆ. ಗ್ರಾಮಸ್ಥರು ಬೇಸಿಗೆ ಎಂದು ಕಳೆದೀತು ಎನ್ನುವ ಚಿಂತೆಯಲ್ಲೇ ಇದ್ದರೆ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಮುಗಿದರೆ ಸಾಕು ಅಂದುಕೊಳ್ಳುತ್ತಿದ್ದಾರೆ.
ಮುಖ್ಯಾಂಶಗಳು
ಚೆಕ್‌ಪೋಸ್ಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಬಿಸಿಲಿಗೆ ಹೈರಾಣು ಹೊಲಗಳಲ್ಲಿನ ಮರಗಳ ಕೆಳಗೆ ಜನರ ವಿಶ್ರಾಂತಿ ಬಿಸಿಲಿನ ಝಳಕ್ಕೆ ಹೆದರಿ ರಾತ್ರಿ ನೀರು ಪೂರೈಕೆ ಬಿಸಿಲಿಗೆ ಬತ್ತಿದ ಕೃಷ್ಣಾ ತುಂಗಭದ್ರಾ ನದಿಗಳು ಜನರ ಸಮಸ್ಯೆಗೆ ಸ್ಪಂದಿಸದ ಪಂಚಾಯಿತಿಗಳು ಚುನಾವಣೆ ಕಾರ್ಯದಲ್ಲಿ ಮುಳುಗಿದ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT