ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಥತೆ ಒಪ್ಪಿಕೊಂಡವರನ್ನು ಬಲಶಾಲಿ ಎನ್ನುವುದಿಲ್ಲ: ಸಿದ್ದರಾಮಯ್ಯ

Last Updated 1 ಅಕ್ಟೋಬರ್ 2019, 14:19 IST
ಅಕ್ಷರ ಗಾತ್ರ

ರಾಯಚೂರು: ‘ತಂತಿ ಮೇಲೆ ನಡೆಯುವ ಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದಾರೆ. ಇಂಥವರನ್ನು ಬಲಶಾಲಿ ಎಂದು ಕರೆಯುವುದಕ್ಕೆ ಸಾಧ್ಯವೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ವ್ಯಾಪಾರಿಗಳೊಂದಿಗೆ ಸಂವಾದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ತಂತಿ ಮೇಲೆ ನಡೆಯುವುದು ಕಷ್ಟವಾಗುತ್ತದೆ, ಕೆಳಗೆ ಇಳಿಯಿರಿ ಎಂದು ನಾನು ಹೇಳಿದ್ದೇನೆ. ಕೇಂದ್ರದಿಂದ ನೆರೆ ಪರಿಹಾರ ತರಲು ಸಾಧ್ಯವಾಗದ ಇಂಥ ಮುಖ್ಯಮಂತ್ರಿಯನ್ನು ಸ್ಟ್ರಾಂಗ್‌ ಎಂದು ಕರೆಯಲು ಸಾಧ್ಯವೆ’ ಎಂದು ಮತ್ತೆ ಕಿಚಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT