<p><strong>ಲಿಂಗಸುಗೂರು:</strong> ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಮೂರು ಮನೆಗಳು, ತಾಲ್ಲೂಕಿನ ಚಿತ್ತಾಪುರ, ಈಚನಾಳ ತಾಂಡಾದಲ್ಲಿ ತಲಾ ಒಂದು ಮನೆಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದರಿಂದ ಜನ ಭಯಬೀತರಾಗಿದ್ದಾರೆ.</p>.<p>ಕರಡಕಲ್ ಗ್ರಾಮದಲ್ಲಿ ಕಿರಾಣಿ ವರ್ತಕ ಮಹಾಂತೇಶ ಕುಂಬಾರ ಮನೆಯ ಬಾಗಿಲು ಮುರಿದು ಅಲ್ಮೇರಾದಲ್ಲಿದ್ದ 30 ಗ್ರಾಂ ಚಿನ್ನದ ಸರ, ₹50 ಸಾವಿರ ಕಳ್ಳತನವಾಗಿದೆ. ಗ್ರಾಮದ ಗುಂಡಯ್ಯ ಸೊಪ್ಪಿಮಠ ಮನೆಯಲ್ಲಿ 40 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಆಭರಣ, ₹40 ಸಾವಿರ ಕಳ್ಳತನವಾಗಿದೆ. ರುದ್ರಯ್ಯಸ್ವಾಮಿ ಬಜಾರಮಠ ಮನೆಯಲ್ಲಿ 37 ಗ್ರಾಂ ಚಿನ್ನ, 26 ಗ್ರಾಂ ಬೆಳ್ಳಿ, ₹65 ಸಾವಿರ ಕಳ್ಳತನವಾಗಿದೆ.</p>.<p>ತಾಲ್ಲೂಕಿನ ಚಿತ್ತಾಪುರ ಗ್ರಾಮದಲ್ಲಿ ಪ್ರಕಾಶ ಕುರಿ ಅವರಿಗೆ ಸಂಬಂಧಿಸಿದ ಎಸ್ಬಿಐ ಸೇವಾ ಕೇಂದ್ರದ ಬೀಗ ಮುರಿದು ಕೇಂದ್ರದಲ್ಲಿದ್ದ ₹1.45 ಲಕ್ಷ ಕದ್ದಿದ್ದಾರೆ. ಈಚನಾಳ ತಾಂಡಾ-2ರ ಶಾಂತಮ ಖೀರಪ್ಪ ಜಾಧವ್ ಮನೆಯಲ್ಲಿ 65 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿ ಮತ್ತು ನಗದು ಸೇರಿ ಒಟ್ಟು ₹4,89,900 ಮೌಲ್ಯದ ವಸ್ತುಗಳ ಕಳ್ಳತನವಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<p>ಸ್ಥಳಕ್ಕೆ ಭಾನುವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಮೂರು ಮನೆಗಳು, ತಾಲ್ಲೂಕಿನ ಚಿತ್ತಾಪುರ, ಈಚನಾಳ ತಾಂಡಾದಲ್ಲಿ ತಲಾ ಒಂದು ಮನೆಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದರಿಂದ ಜನ ಭಯಬೀತರಾಗಿದ್ದಾರೆ.</p>.<p>ಕರಡಕಲ್ ಗ್ರಾಮದಲ್ಲಿ ಕಿರಾಣಿ ವರ್ತಕ ಮಹಾಂತೇಶ ಕುಂಬಾರ ಮನೆಯ ಬಾಗಿಲು ಮುರಿದು ಅಲ್ಮೇರಾದಲ್ಲಿದ್ದ 30 ಗ್ರಾಂ ಚಿನ್ನದ ಸರ, ₹50 ಸಾವಿರ ಕಳ್ಳತನವಾಗಿದೆ. ಗ್ರಾಮದ ಗುಂಡಯ್ಯ ಸೊಪ್ಪಿಮಠ ಮನೆಯಲ್ಲಿ 40 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಆಭರಣ, ₹40 ಸಾವಿರ ಕಳ್ಳತನವಾಗಿದೆ. ರುದ್ರಯ್ಯಸ್ವಾಮಿ ಬಜಾರಮಠ ಮನೆಯಲ್ಲಿ 37 ಗ್ರಾಂ ಚಿನ್ನ, 26 ಗ್ರಾಂ ಬೆಳ್ಳಿ, ₹65 ಸಾವಿರ ಕಳ್ಳತನವಾಗಿದೆ.</p>.<p>ತಾಲ್ಲೂಕಿನ ಚಿತ್ತಾಪುರ ಗ್ರಾಮದಲ್ಲಿ ಪ್ರಕಾಶ ಕುರಿ ಅವರಿಗೆ ಸಂಬಂಧಿಸಿದ ಎಸ್ಬಿಐ ಸೇವಾ ಕೇಂದ್ರದ ಬೀಗ ಮುರಿದು ಕೇಂದ್ರದಲ್ಲಿದ್ದ ₹1.45 ಲಕ್ಷ ಕದ್ದಿದ್ದಾರೆ. ಈಚನಾಳ ತಾಂಡಾ-2ರ ಶಾಂತಮ ಖೀರಪ್ಪ ಜಾಧವ್ ಮನೆಯಲ್ಲಿ 65 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿ ಮತ್ತು ನಗದು ಸೇರಿ ಒಟ್ಟು ₹4,89,900 ಮೌಲ್ಯದ ವಸ್ತುಗಳ ಕಳ್ಳತನವಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<p>ಸ್ಥಳಕ್ಕೆ ಭಾನುವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>