<p><strong>ರಾಯಚೂರು:</strong> ಶಿಷ್ಟರ ರಕ್ಷಣೆ, ದುಷ್ಟರ ವಿನಾಶದ ಪ್ರತೀಕವಾದ ಮಹಾನವಮಿ ಹಬ್ಬದ ಕೊನೆಯ ದಿನ ವಿಜಯದಶಮಿಯನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ರಾಯಚೂರು ನಗರಸಭೆಯಿಂದ ವಿಶೇಷವಾಗಿ ನಾಡದೇವಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ನಗರಸಭೆ ಕಚೇರಿಯಿಂದ ಮಧ್ಯಾಹ್ನ ಆರಂಭವಾದ ಮೆರವಣಿಗೆಯು ಮಾಣಿಕಪ್ರಭು ದೇವಸ್ಥಾನದ ಹತ್ತಿರ ಬನ್ನಿಮಂಟಪಕ್ಕೆ ಸೂರ್ಯಾಸ್ತದ ಬಳಿಕ ತಲುಪಿತು. ಮಾರ್ಗದುದ್ದಕ್ಕೂ ನಾಡದೇವಿ ಎದುರು ಕಲಾತಂಡಗಳ ಪ್ರದರ್ಶನ ಹಾಗೂ ವಾದ್ಯತಂಡಗಳ ವಾದನವು ಆಕರ್ಷಕವಾಗಿತ್ತು.</p>.<p>ಮೆರವಣಿಗೆ ಆರಂಭವಾಗುವ ಪೂರ್ವ ನಗರಸಭೆ ಆವರಣದಲ್ಲಿ ಸರಳ ಸಮಾರಂಭ ನಡೆಯಿತು. ದಸರಾ ಹಬ್ಬದ ನಿಮಿತ್ತ ನಗರಸಭೆ ಸದಸ್ಯರು, ಸದಸ್ಯೆಯರು ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಸಾನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ, ‘ನವರಾತ್ರಿ ಸಂದರ್ಭದಲ್ಲಿ ನಾಡದೇವಿಯನ್ನು ಭಕ್ತಿಯಿಂದ ಆರಾಧಿಸುವುದಕ್ಕೆ ಇತಿಹಾಸವಿದೆ. ರಾಯಚೂರು ನಗರಸಭೆಯಿಂದ ವಿಜಯದಶಮಿ ದಿನದಂದು ಪ್ರತಿವರ್ಷವೂ ನಾಡದೇವಿಯ ಭವ್ಯ ಮೆರವಣಿಗೆ ನಡೆಸುವುದು ವಿಶೇಷ. ಈ ವರ್ಷ ಸದಸ್ಯರಿಗಾಗಿ ಕ್ರೀಡೆಗಳನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಗಿದೆ‘ ಎಂದು ಹೇಳಿದರು.</p>.<p>ಜನಾಕರ್ಷಣೆ: ಬೆದರು ಬೊಂಬೆವೇಷ, ಕರಡಿಮಜಲು, ಡೊಳ್ಳು ಕುಣಿತ, ಹಲಗೆ ತಂಡ, ಜಾಂಜ್ ಪತಾಕ್ ವಾದ್ಯ ತಂಡಗಳ ಸಾಲು, ಅವುಗಳ ಮಧ್ಯ ಧ್ವನಿವರ್ಧಕ, ಕುಂಭ ಕಳಸ ಹೊತ್ತ ಮಹಿಳೆಯರು, ಕುದುರೆ ಸವಾರಿಗಳು, ಆಕರ್ಷಕ ಜನಪದ ನೃತ್ಯ ಮಾಡುವುದಕ್ಕೆ ಬಂದಿದ್ದ ಲಂಬಾಣಿ ಯುವತಿಯರ ತಂಡವೂ ಇತ್ತು.</p>.<p>ನಗರಸಭೆ ಸದಸ್ಯರೆಲ್ಲರೂ ತಲೆಗೆ ಕೇಸರಿ, ಗುಲಾಬಿ ವರ್ಣದ ಪೇಟಾ ಧರಿಸಿದ್ದರು. ಆಕರ್ಷಕವಾಗಿ ಆಯೋಜಿಸಿದ್ದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು. ನಗರಸಭೆ ಕಚೇರಿಯಿಂದ ಆರಂಭವಾದ ಮೆರವಣಿಗೆಯು ತೀನ್ ಕಂದಿಲ್ ವೃತ್ತ, ಎಲ್ವಿಡಿ ಕಾಲೇಜು ಮಾರ್ಗದಿಂದ ಬನ್ನಿ ಮಂಟಪ ತಲುಪಿತು.</p>.<p>ಮೆರವಣಿಗೆಗೆ ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಶಾಸಕ ಡಾ.ಶಿವರಾಜ ಪಾಟೀಲ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಹಿರಿಯ ಸದಸ್ಯ ಜಯಣ್ಣ ಅವರು ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಶಿಷ್ಟರ ರಕ್ಷಣೆ, ದುಷ್ಟರ ವಿನಾಶದ ಪ್ರತೀಕವಾದ ಮಹಾನವಮಿ ಹಬ್ಬದ ಕೊನೆಯ ದಿನ ವಿಜಯದಶಮಿಯನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ರಾಯಚೂರು ನಗರಸಭೆಯಿಂದ ವಿಶೇಷವಾಗಿ ನಾಡದೇವಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ನಗರಸಭೆ ಕಚೇರಿಯಿಂದ ಮಧ್ಯಾಹ್ನ ಆರಂಭವಾದ ಮೆರವಣಿಗೆಯು ಮಾಣಿಕಪ್ರಭು ದೇವಸ್ಥಾನದ ಹತ್ತಿರ ಬನ್ನಿಮಂಟಪಕ್ಕೆ ಸೂರ್ಯಾಸ್ತದ ಬಳಿಕ ತಲುಪಿತು. ಮಾರ್ಗದುದ್ದಕ್ಕೂ ನಾಡದೇವಿ ಎದುರು ಕಲಾತಂಡಗಳ ಪ್ರದರ್ಶನ ಹಾಗೂ ವಾದ್ಯತಂಡಗಳ ವಾದನವು ಆಕರ್ಷಕವಾಗಿತ್ತು.</p>.<p>ಮೆರವಣಿಗೆ ಆರಂಭವಾಗುವ ಪೂರ್ವ ನಗರಸಭೆ ಆವರಣದಲ್ಲಿ ಸರಳ ಸಮಾರಂಭ ನಡೆಯಿತು. ದಸರಾ ಹಬ್ಬದ ನಿಮಿತ್ತ ನಗರಸಭೆ ಸದಸ್ಯರು, ಸದಸ್ಯೆಯರು ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಸಾನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ, ‘ನವರಾತ್ರಿ ಸಂದರ್ಭದಲ್ಲಿ ನಾಡದೇವಿಯನ್ನು ಭಕ್ತಿಯಿಂದ ಆರಾಧಿಸುವುದಕ್ಕೆ ಇತಿಹಾಸವಿದೆ. ರಾಯಚೂರು ನಗರಸಭೆಯಿಂದ ವಿಜಯದಶಮಿ ದಿನದಂದು ಪ್ರತಿವರ್ಷವೂ ನಾಡದೇವಿಯ ಭವ್ಯ ಮೆರವಣಿಗೆ ನಡೆಸುವುದು ವಿಶೇಷ. ಈ ವರ್ಷ ಸದಸ್ಯರಿಗಾಗಿ ಕ್ರೀಡೆಗಳನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಗಿದೆ‘ ಎಂದು ಹೇಳಿದರು.</p>.<p>ಜನಾಕರ್ಷಣೆ: ಬೆದರು ಬೊಂಬೆವೇಷ, ಕರಡಿಮಜಲು, ಡೊಳ್ಳು ಕುಣಿತ, ಹಲಗೆ ತಂಡ, ಜಾಂಜ್ ಪತಾಕ್ ವಾದ್ಯ ತಂಡಗಳ ಸಾಲು, ಅವುಗಳ ಮಧ್ಯ ಧ್ವನಿವರ್ಧಕ, ಕುಂಭ ಕಳಸ ಹೊತ್ತ ಮಹಿಳೆಯರು, ಕುದುರೆ ಸವಾರಿಗಳು, ಆಕರ್ಷಕ ಜನಪದ ನೃತ್ಯ ಮಾಡುವುದಕ್ಕೆ ಬಂದಿದ್ದ ಲಂಬಾಣಿ ಯುವತಿಯರ ತಂಡವೂ ಇತ್ತು.</p>.<p>ನಗರಸಭೆ ಸದಸ್ಯರೆಲ್ಲರೂ ತಲೆಗೆ ಕೇಸರಿ, ಗುಲಾಬಿ ವರ್ಣದ ಪೇಟಾ ಧರಿಸಿದ್ದರು. ಆಕರ್ಷಕವಾಗಿ ಆಯೋಜಿಸಿದ್ದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು. ನಗರಸಭೆ ಕಚೇರಿಯಿಂದ ಆರಂಭವಾದ ಮೆರವಣಿಗೆಯು ತೀನ್ ಕಂದಿಲ್ ವೃತ್ತ, ಎಲ್ವಿಡಿ ಕಾಲೇಜು ಮಾರ್ಗದಿಂದ ಬನ್ನಿ ಮಂಟಪ ತಲುಪಿತು.</p>.<p>ಮೆರವಣಿಗೆಗೆ ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಶಾಸಕ ಡಾ.ಶಿವರಾಜ ಪಾಟೀಲ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಹಿರಿಯ ಸದಸ್ಯ ಜಯಣ್ಣ ಅವರು ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>