<p><strong>ಬಿಡದಿ: </strong>ಕೋವಿಡ್ ಲಾಕ್ಡೌನ್ ಪರಿಣಾಮ ಸುಮಾರು 40 ದಿನಗಳಿಂದ ಸ್ತಬ್ಧವಾಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮ ಸೋಮವಾರದಿಂದ ಬಸ್ ಸಂಚಾರ ಆರಂಭಿಸಿದೆ.</p>.<p>ಬಿಡದಿಯಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಿಸಿದ್ದು, ಬಸ್ನಲ್ಲಿ ಪ್ರಯಾಣಿಸಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.</p>.<p>ಪ್ರಯಾಣಿಕ ಸತೀಶ್ ಮಾತನಾಡಿ, ‘ನಾನು ಬೆಂಗಳೂರಿಗೆ ಹೋಗಲು ಬಸ್ ಅವಲಂಬಿಸಿದ್ದೇನೆ. ಈಗ ಸರ್ಕಾರ ಅನ್ಲಾಕ್ ಘೋಷಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ನಮಗೆ ಕೆಲಸಕ್ಕೆ ಹೋಗಿಬರಲು ಸಹಕಾರಿಯಾಗಿದೆ. ಕೋವಿಡ್ ನಿಯಮಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಪ್ರಯಾಣ ಮಾಡಬೇಕು’ ಎಂದರು.</p>.<p>‘ಬಸ್ನಲ್ಲಿ 50 ಸೀಟ್ಗಳು ಲಭ್ಯವಿವೆ. ಒಂದು ಬಸ್ನಲ್ಲಿ 25 ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಡದಿ ನಿಲ್ದಾಣದಿಂದ 120 ಮಾರ್ಗಗಳಿದ್ದು, ಪ್ರಸ್ತುತ 80 ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ’ ಎಂದು ಬಿಡದಿ ಬಸ್ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ನಾಗಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ: </strong>ಕೋವಿಡ್ ಲಾಕ್ಡೌನ್ ಪರಿಣಾಮ ಸುಮಾರು 40 ದಿನಗಳಿಂದ ಸ್ತಬ್ಧವಾಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮ ಸೋಮವಾರದಿಂದ ಬಸ್ ಸಂಚಾರ ಆರಂಭಿಸಿದೆ.</p>.<p>ಬಿಡದಿಯಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಿಸಿದ್ದು, ಬಸ್ನಲ್ಲಿ ಪ್ರಯಾಣಿಸಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.</p>.<p>ಪ್ರಯಾಣಿಕ ಸತೀಶ್ ಮಾತನಾಡಿ, ‘ನಾನು ಬೆಂಗಳೂರಿಗೆ ಹೋಗಲು ಬಸ್ ಅವಲಂಬಿಸಿದ್ದೇನೆ. ಈಗ ಸರ್ಕಾರ ಅನ್ಲಾಕ್ ಘೋಷಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ನಮಗೆ ಕೆಲಸಕ್ಕೆ ಹೋಗಿಬರಲು ಸಹಕಾರಿಯಾಗಿದೆ. ಕೋವಿಡ್ ನಿಯಮಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಪ್ರಯಾಣ ಮಾಡಬೇಕು’ ಎಂದರು.</p>.<p>‘ಬಸ್ನಲ್ಲಿ 50 ಸೀಟ್ಗಳು ಲಭ್ಯವಿವೆ. ಒಂದು ಬಸ್ನಲ್ಲಿ 25 ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಡದಿ ನಿಲ್ದಾಣದಿಂದ 120 ಮಾರ್ಗಗಳಿದ್ದು, ಪ್ರಸ್ತುತ 80 ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ’ ಎಂದು ಬಿಡದಿ ಬಸ್ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ನಾಗಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>