ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ಕಾಡಾನೆ ದಾಳಿ; ತೆಂಗಿನ ಮರಗಳ ನಾಶ

Published 27 ಜುಲೈ 2023, 6:22 IST
Last Updated 27 ಜುಲೈ 2023, 6:22 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ತಗಚಗೆರೆ ಗ್ರಾಮಕ್ಕೆ ಬುಧವಾರ ತಡರಾತ್ರಿ ಬಂದಿರುವ ಕಾಡಾನೆಗಳ ಹಿಂಡು, ತೆಂಗಿನ ಮರ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಗೊಳಿಸಿವೆ.

ಗ್ರಾಮದ ಶಶಿಧರ ಎಂಬುವರಿಗೆ ಸೇರಿದ ಐದು ದೊಡ್ಡ ತೆಂಗಿನ ಮರಗಳು, ಹತ್ತಕ್ಕೂ ಹೆಚ್ಚು ಸಸಿಗಳು ನಾಶವಾಗಿವೆ. ಪಕ್ಕದಲ್ಲಿದ್ದ ಟೊಮೆಟೊ ಬೆಳೆಯಲ್ಲಿ ಓಡಾಡಿರುವುದರಿಂದ ಬೆಳೆ ಹಾನಿಯಾಗಿದೆ.

ವಿಷಯ ತಿಳಿದು ಬೆಳಿಗ್ಗೆಯೇ ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಹಾನಿಗೊಂಡಿರುವ ಬೆಳೆಯನ್ನು ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT