ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಸಂವಿಧಾನ ಬದಲಿಸಲು ಮುಂದಾದರೆ ಭಸ್ಮವಾಗುತ್ತಾರೆ: ಶಾಸಕ ಹುಸೇನ್ ಎಚ್ಚರಿಕೆ

Published : 27 ನವೆಂಬರ್ 2025, 5:08 IST
Last Updated : 27 ನವೆಂಬರ್ 2025, 5:08 IST
ಫಾಲೋ ಮಾಡಿ
Comments
ರಾಮನಗರದ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ
ರಾಮನಗರದ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ
ದೇಶ ಮುನ್ನಡೆಸುವ ಸಂವಿಧಾನ ನಮ್ಮ ಅಸ್ಮಿತೆ. ಅದರ ಪೀಠಿಕೆಯ ಪ್ರತಿಕೃತಿ ಮತ್ತು ಅಂಬೇಡ್ಕರ್ ಪುತ್ಥಳಿಯನ್ನು ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರ ಚಿಂತನೆ ಬಹಳ ದೊಡ್ಡದು
– ಸಿ.ಎಂ. ಲಿಂಗಪ್ಪ ಮಾಜಿ ಶಾಸಕ
1946 ನ. 26ರಂದು ಭಾರತದ ಯುಗ ಪರಿವರ್ತನೆಯಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಸಮರ್ಪಿಸುವುದರೊಂದಿಗೆ 2 ಸಾವಿರ ವರ್ಷಗಳಿಂದ ದೇಶವನ್ನು ಆವರಿಸಿದ್ದ ಅಂಧಕಾರ ಸರಿಯಿತು
– ಡಾ. ಬಂಜಗೆರೆ ಜಯಪ್ರಕಾಶ್ ಸಾಹಿತಿ
ಸಂವಿಧಾನ ಸಮರ್ಪಿಸಿದ ದಿನ ಮತ್ತು ಜಾರಿಯಾದ ದಿನವನ್ನು ತಪ್ಪಾಗಿ ಅರ್ಥೈಸಿ ಜನರಿಗೆ ಅದರ ಮಹತ್ವ ಅರ್ಥವಾಗದಂತೆ ನೋಡಿಕೊಳ್ಳಲಾಗಿತ್ತು. ಇತ್ತೀಚೆಗೆ ಸಮುದಾಯಗಳು ಎಚ್ಚೆತ್ತುಕೊಂಡು ಸಂವಿಧಾನದ ಬಗ್ಗೆ ಜಾಗೃತರಾಗುತ್ತಿವೆ
– ಡಾ. ಶಿವಕುಮಾರ್ ನಿರ್ದೇಶಕ ಅಕ್ಕ ಐಎಎಸ್ ಅಕಾಡೆಮಿ
‘ರಹಸ್ಯ ಕಾರ್ಯಸೂಚಿಗೆ ಅಂಬೇಡ್ಕರ್‌ ವಾದವೇ ಅಸ್ತ್ರ’
‘ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನದ ವಿರುದ್ಧ ನಡೆಸುತ್ತಿರುವ ರಹಸ್ಯ ಕಾರ್ಯಸೂಚಿ ಎದುರಿಸಲು ಅಂಬೇಡ್ಕರ್ ವಾದ ಮತ್ತು ಸಂವಿಧಾನವೇ ನಮಗಿರುವ ಅಸ್ತ್ರ. ಬಸವಣ್ಣನವರು ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವನಮ್ಮವನೆಂದೆನಿಸಯ್ಯಾ ಎಂದರು. ಅದೇ ಆಶಯದೊಂದಿಗೆ ಸಂವಿಧಾನದ ಪೀಠಿಕೆ ಶುರುವಾಗುತ್ತದೆ. ಅಂತಹ ರಾಷ್ಟ್ರಗ್ರಂಥದ ಮಹತ್ವವನ್ನು ಜನರಿಗೆ ತಿಳಿಸಲು ನಗರಸಭೆ ಆವರಣದಲ್ಲಿ ಪೀಠಿಕೆ ಮತ್ತು ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT