<p><strong>ಕನಕಪುರ</strong>: ರೋಟರಿ ಕನಕಪುರ ಮಿಲ್ಕ್ ಸಿಟಿ ಮತ್ತು ರೋಟರಿ ಮೇಕೆದಾಟು ಸಂಗಮ ವತಿಯಿಂದ ಮಂಗಳವಾರ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ನಡೆಯಿತು.</p>.<p>ಈ ವೇಳೆ ರೊಟೇರಿಯನ್ ಶಿವಕುಮಾರ್ ಮಾತನಾಡಿ, ವೈದ್ಯರು ಎಂದರೆ ಎರಡನೇ ದೇವರೆನ್ನುತ್ತಾರೆ. ಅದು ಸತ್ಯವು ಹೌದು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ್ಗೆ ತುತ್ತಾದವರ ಪ್ರಾಣ ಉಳಿಸಿದ್ದಾರೆ ಎಂದರು.</p>.<p>ಮಹಿಳಾ ವೈದ್ಯರು, ಪ್ರಸೂತಿ ತಜ್ಞರು ಹಗಲು ರಾತ್ರಿ ಎನ್ನದೆ ಯಾವುದೇ ಸಮಯವಾದರೂ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿಗೆ ಪುನರ್ ಜನ್ಮ ನೀಡುತ್ತಿದ್ದಾರೆ ಎಂದರು.</p>.<p>ರೋಟರಿ ಅಧ್ಯಕ್ಷ ಸಂದೀಪ್ ದವನಮ್ ಮಾತನಾಡಿ, ರೋಟರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮುಂದೆಯೂ ಸಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.</p>.<p>ನಮ್ಮ ಮುಂದಿನ ಗುರಿ ಸಮಾಜದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಉತ್ತಮ ಚಿಕಿತ್ಸೆ ಸೇರಿದಂತೆ ಅವಶ್ಯಕತೆ ಅನುಗುಣವಾಗಿ ಅವರ ಸೇವೆ ನೀಡಲಾಗುವುದು ಎಂದರು.</p>.<p>ಸಮಾಜಕ್ಕೆ ವೈದ್ಯರಷ್ಟೇ ಮುಖ್ಯವಾದದ್ದು, ಮಾಧ್ಯಮ. ಸಮಾಜದಲ್ಲಿ ನಾಲ್ಕನೇ ಅಂಗವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ. ತಪ್ಪು ಒಪ್ಪುಗಳನ್ನು ಜನರ ಮುಂದೆ ಇಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. </p>.<p>ಎಚ್.ಕೆ. ರವಿ, ರಮೇಶ್, ಸಂಜಯ್, ಅನುಜವಾಡಿ ವಿಜಿ, ಹೆಗ್ಗನೂರು ವಿಜಿ, ದೇವರಾಜ್ ಅರಸ್, ಚಂದ್ರು, ಶಿವಶಂಕರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ರೋಟರಿ ಕನಕಪುರ ಮಿಲ್ಕ್ ಸಿಟಿ ಮತ್ತು ರೋಟರಿ ಮೇಕೆದಾಟು ಸಂಗಮ ವತಿಯಿಂದ ಮಂಗಳವಾರ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ನಡೆಯಿತು.</p>.<p>ಈ ವೇಳೆ ರೊಟೇರಿಯನ್ ಶಿವಕುಮಾರ್ ಮಾತನಾಡಿ, ವೈದ್ಯರು ಎಂದರೆ ಎರಡನೇ ದೇವರೆನ್ನುತ್ತಾರೆ. ಅದು ಸತ್ಯವು ಹೌದು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ್ಗೆ ತುತ್ತಾದವರ ಪ್ರಾಣ ಉಳಿಸಿದ್ದಾರೆ ಎಂದರು.</p>.<p>ಮಹಿಳಾ ವೈದ್ಯರು, ಪ್ರಸೂತಿ ತಜ್ಞರು ಹಗಲು ರಾತ್ರಿ ಎನ್ನದೆ ಯಾವುದೇ ಸಮಯವಾದರೂ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿಗೆ ಪುನರ್ ಜನ್ಮ ನೀಡುತ್ತಿದ್ದಾರೆ ಎಂದರು.</p>.<p>ರೋಟರಿ ಅಧ್ಯಕ್ಷ ಸಂದೀಪ್ ದವನಮ್ ಮಾತನಾಡಿ, ರೋಟರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮುಂದೆಯೂ ಸಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.</p>.<p>ನಮ್ಮ ಮುಂದಿನ ಗುರಿ ಸಮಾಜದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಉತ್ತಮ ಚಿಕಿತ್ಸೆ ಸೇರಿದಂತೆ ಅವಶ್ಯಕತೆ ಅನುಗುಣವಾಗಿ ಅವರ ಸೇವೆ ನೀಡಲಾಗುವುದು ಎಂದರು.</p>.<p>ಸಮಾಜಕ್ಕೆ ವೈದ್ಯರಷ್ಟೇ ಮುಖ್ಯವಾದದ್ದು, ಮಾಧ್ಯಮ. ಸಮಾಜದಲ್ಲಿ ನಾಲ್ಕನೇ ಅಂಗವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ. ತಪ್ಪು ಒಪ್ಪುಗಳನ್ನು ಜನರ ಮುಂದೆ ಇಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. </p>.<p>ಎಚ್.ಕೆ. ರವಿ, ರಮೇಶ್, ಸಂಜಯ್, ಅನುಜವಾಡಿ ವಿಜಿ, ಹೆಗ್ಗನೂರು ವಿಜಿ, ದೇವರಾಜ್ ಅರಸ್, ಚಂದ್ರು, ಶಿವಶಂಕರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>