ಪಾಲನ ಹಳ್ಳಿ ಮತ್ತು ವೀರಾಪುರದ ನಡುವೆ ಇರುವ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಬೃಹತ್ ಬಂಡೆಯ ಮೇಲೆ ಇರುವ ಪ್ರಾಗೈತಿಹಾಸಿಕ ಕಲ್ಗೋರಿಗಳು ನಾಶವಾಗಿವೆ. ಅರಣ್ಯ ಪ್ರದೇಶ ನೆಲಮಂಗಲ ವಲಯಕ್ಕೆ ಸೇರಿದೆ, ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾದ ಅರಣ್ಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯವರ ಜತೆಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.