<p>ಶಿವಮೊಗ್ಗ: ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ (ಔಟಾಗದೆ 110; 187ಎಸೆತ, 14 ಬೌಂಡರಿ) ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಹರ್ಷಿಲ್ ಧರ್ಮಾನಿ (ಔಟಾಗದೆ 102; 135ಎ, 10ಬೌಂ, 4ಸಿ) ಶನಿವಾರ ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. </p>.<p>ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ ಇವರು ಕಲೆ ಹಾಕಿರುವ 172ರನ್ಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಮುಂಬೈ ವಿರುದ್ಧದ ಫೈನಲ್ನಲ್ಲಿ ಇನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಆತಿಥೇಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 64 ಓವರ್ಗಳಲ್ಲಿ 1 ವಿಕೆಟ್ಗೆ 281ರನ್ ಕಲೆಹಾಕಿದೆ. ಮುಂಬೈ ತಂಡವು ಪ್ರಥಮ ಇನಿಂಗ್ಸ್ನಲ್ಲಿ 113.5 ಓವರ್ಗಳಲ್ಲಿ 380ರನ್ ದಾಖಲಿಸಿದೆ. </p>.<p>ಕರ್ನಾಟಕದ ಪರ ಇನಿಂಗ್ಸ್ ಆರಂಭಿಸಿದ ಪ್ರಖರ್ ಹಾಗೂ ಕಾರ್ತಿಕ್ ಎಸ್.ಯು (50; 67ಎ, 4ಬೌಂ, 3ಸಿ) ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮುಂಬೈ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಮೊದಲ ವಿಕೆಟ್ ಜೊತೆಯಾಟದಲ್ಲಿ 144 ಎಸೆತಗಳಲ್ಲಿ 109ರನ್ಗಳನ್ನು ಕಲೆಹಾಕಿದರು. 24ನೇ ಓವರ್ ಬೌಲ್ ಮಾಡಿದ ಪ್ರೇಮ್ ದೇವ್ಕರ್ ಮೂರನೇ ಎಸೆತದಲ್ಲಿ ಕಾರ್ತಿಕ್ ವಿಕೆಟ್ ಕೆಡವಿದರು.</p>.<p>ನಂತರ ಒಂದಾದ ಪ್ರಖರ್ ಹಾಗೂ ಹರ್ಷಿಲ್, ಮುಂಬೈ ಬೌಲರ್ಗಳಿಗೆ ಸವಾಲಾದರು. ಬೌಂಡರಿ, ಸಿಕ್ಸರ್ಗಳ ಮೂಲಕ ಸುಂದರ ಇನಿಂಗ್ಸ್ ಕಟ್ಟಿದರು. ಈ ಜೊತೆಯಾಟ ಮುರಿಯಲು ಮುಂಬೈ ತಂಡದ ನಾಯಕ ಬೌಲಿಂಗ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. 7 ಮಂದಿಯನ್ನು ದಾಳಿಗಿಳಿಸಿದರೂ ವಿಕೆಟ್ ಉರುಳಿಸಲು ಆಗಲಿಲ್ಲ.</p>.<p>ಇದಕ್ಕೂ ಮುನ್ನ 6 ವಿಕೆಟ್ಗೆ 328ರನ್ಗಳಿಂದ ಶನಿವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡವು ಈ ಮೊತ್ತಕ್ಕೆ 52ರನ್ ಸೇರಿಸಿ ಆಲೌಟ್ ಆಯಿತು. ಆಯುಷ್ ಸಚಿನ್ ವರ್ತಕ್ (73; 98ಎ, 8ಬೌಂ, 2ಸಿ) ಮತ್ತು ವಿಕೆಟ್ ಕೀಪರ್ ಪ್ರತೀಕ್ ಯಾದವ್ (30; 86ಎ, 5ಬೌಂ) ತಂಡದ ಮೊತ್ತ ಹೆಚ್ಚಿಸಲು ನೆರವಾದರು.</p>.<p>ಕರ್ನಾಟಕದ ಪರ ಹಾರ್ದಿಕ್ ರಾಜ್ 80ರನ್ ನೀಡಿ 4 ವಿಕೆಟ್ ಉರುಳಿಸಿದರು. ಎನ್.ಸಮರ್ಥ್ (56ಕ್ಕೆ2) ಮತ್ತು ಸಮಿತ್ ದ್ರಾವಿಡ್ (60ಕ್ಕೆ2) ತಲಾ ಎರಡು ವಿಕೆಟ್ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ (ಔಟಾಗದೆ 110; 187ಎಸೆತ, 14 ಬೌಂಡರಿ) ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಹರ್ಷಿಲ್ ಧರ್ಮಾನಿ (ಔಟಾಗದೆ 102; 135ಎ, 10ಬೌಂ, 4ಸಿ) ಶನಿವಾರ ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. </p>.<p>ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ ಇವರು ಕಲೆ ಹಾಕಿರುವ 172ರನ್ಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಮುಂಬೈ ವಿರುದ್ಧದ ಫೈನಲ್ನಲ್ಲಿ ಇನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಆತಿಥೇಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 64 ಓವರ್ಗಳಲ್ಲಿ 1 ವಿಕೆಟ್ಗೆ 281ರನ್ ಕಲೆಹಾಕಿದೆ. ಮುಂಬೈ ತಂಡವು ಪ್ರಥಮ ಇನಿಂಗ್ಸ್ನಲ್ಲಿ 113.5 ಓವರ್ಗಳಲ್ಲಿ 380ರನ್ ದಾಖಲಿಸಿದೆ. </p>.<p>ಕರ್ನಾಟಕದ ಪರ ಇನಿಂಗ್ಸ್ ಆರಂಭಿಸಿದ ಪ್ರಖರ್ ಹಾಗೂ ಕಾರ್ತಿಕ್ ಎಸ್.ಯು (50; 67ಎ, 4ಬೌಂ, 3ಸಿ) ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮುಂಬೈ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಮೊದಲ ವಿಕೆಟ್ ಜೊತೆಯಾಟದಲ್ಲಿ 144 ಎಸೆತಗಳಲ್ಲಿ 109ರನ್ಗಳನ್ನು ಕಲೆಹಾಕಿದರು. 24ನೇ ಓವರ್ ಬೌಲ್ ಮಾಡಿದ ಪ್ರೇಮ್ ದೇವ್ಕರ್ ಮೂರನೇ ಎಸೆತದಲ್ಲಿ ಕಾರ್ತಿಕ್ ವಿಕೆಟ್ ಕೆಡವಿದರು.</p>.<p>ನಂತರ ಒಂದಾದ ಪ್ರಖರ್ ಹಾಗೂ ಹರ್ಷಿಲ್, ಮುಂಬೈ ಬೌಲರ್ಗಳಿಗೆ ಸವಾಲಾದರು. ಬೌಂಡರಿ, ಸಿಕ್ಸರ್ಗಳ ಮೂಲಕ ಸುಂದರ ಇನಿಂಗ್ಸ್ ಕಟ್ಟಿದರು. ಈ ಜೊತೆಯಾಟ ಮುರಿಯಲು ಮುಂಬೈ ತಂಡದ ನಾಯಕ ಬೌಲಿಂಗ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. 7 ಮಂದಿಯನ್ನು ದಾಳಿಗಿಳಿಸಿದರೂ ವಿಕೆಟ್ ಉರುಳಿಸಲು ಆಗಲಿಲ್ಲ.</p>.<p>ಇದಕ್ಕೂ ಮುನ್ನ 6 ವಿಕೆಟ್ಗೆ 328ರನ್ಗಳಿಂದ ಶನಿವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡವು ಈ ಮೊತ್ತಕ್ಕೆ 52ರನ್ ಸೇರಿಸಿ ಆಲೌಟ್ ಆಯಿತು. ಆಯುಷ್ ಸಚಿನ್ ವರ್ತಕ್ (73; 98ಎ, 8ಬೌಂ, 2ಸಿ) ಮತ್ತು ವಿಕೆಟ್ ಕೀಪರ್ ಪ್ರತೀಕ್ ಯಾದವ್ (30; 86ಎ, 5ಬೌಂ) ತಂಡದ ಮೊತ್ತ ಹೆಚ್ಚಿಸಲು ನೆರವಾದರು.</p>.<p>ಕರ್ನಾಟಕದ ಪರ ಹಾರ್ದಿಕ್ ರಾಜ್ 80ರನ್ ನೀಡಿ 4 ವಿಕೆಟ್ ಉರುಳಿಸಿದರು. ಎನ್.ಸಮರ್ಥ್ (56ಕ್ಕೆ2) ಮತ್ತು ಸಮಿತ್ ದ್ರಾವಿಡ್ (60ಕ್ಕೆ2) ತಲಾ ಎರಡು ವಿಕೆಟ್ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>