<p><strong>ಶಿಕಾರಿಪುರ:</strong> ಎಚ್.ಟಿ.ಬಳಿಗಾರ್ ಅವರು ಶೋಷಿತರ, ನೊಂದವರ, ಅಸಹಾಯಕರ ಪರವಾಗಿ ಇದ್ದರು. ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಕೊಡುಗೆ ನೀಡುವ ಮೂಲಕ ಅವರ ಸ್ಮರಣೆ ಮಾಡಲಾಗಿದೆ ಎಂದು ಎಚ್.ಟಿ.ಬಳಿಗಾರ್ ಫೌಂಡೇಶನ್ ಅಧ್ಯಕ್ಷ ಇ.ಎಚ್.ಬಸವರಾಜ್ ಹೇಳಿದರು. </p>.<p>ಪಟ್ಟಣದಲ್ಲಿ ಶುಕ್ರವಾರ ಪಟ್ಟಣದ ವಿದ್ಯಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆ ನೀಡಿ ಮಾತನಾಡಿದರು. </p>.<p>‘ತಾಲ್ಲೂಕಿನಲ್ಲಿ ಎಚ್.ಟಿ.ಬಳಿಗಾರ್ ರಾಜಕೀಯ ಮಾಡಲಿಲ್ಲ. ಬದಲಿಗೆ ನೊಂದವರ ಪರವಾಗಿ ನಿಂತು ಅವರ ರಕ್ಷಣೆ ಮಾಡುತ್ತಿದ್ದರು. ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರ ಅಗಲಿಕೆಗೆ ಕೊರಗದೇ ಅವರ ಆಶಯ ಈಡೇರಿಸುವ ಕೆಲಸವನ್ನು ಫೌಂಡೇಶನ್ ಮೂಲಕ ಮಾಡಲಾಗುವುದು’ ಎಂದರು. </p>.<p>ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಶಿವಣ್ಣ ಬಿಎಸ್ಎನ್ಎಲ್, ಉಪಾಧ್ಯಕ್ಷ ರಸೂಲ್ಸಾಬ್, ರೇವಣಪ್ಪ, ನಾಗಪ್ಪ, ನಾಗಿಹಳ್ಳಿ, ನಾಗರಾಜ್ ಹಿರೇಜಂಬೂರು, ಟಿ.ಓಂಕಾರಪ್ಪ, ಐಶ್ವರ್ಯ, ಭೂಮಿಕಾ, ವಸತಿ ಶಾಲೆಯ ಮುಖ್ಯಸ್ಥ ಈರಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಎಚ್.ಟಿ.ಬಳಿಗಾರ್ ಅವರು ಶೋಷಿತರ, ನೊಂದವರ, ಅಸಹಾಯಕರ ಪರವಾಗಿ ಇದ್ದರು. ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಕೊಡುಗೆ ನೀಡುವ ಮೂಲಕ ಅವರ ಸ್ಮರಣೆ ಮಾಡಲಾಗಿದೆ ಎಂದು ಎಚ್.ಟಿ.ಬಳಿಗಾರ್ ಫೌಂಡೇಶನ್ ಅಧ್ಯಕ್ಷ ಇ.ಎಚ್.ಬಸವರಾಜ್ ಹೇಳಿದರು. </p>.<p>ಪಟ್ಟಣದಲ್ಲಿ ಶುಕ್ರವಾರ ಪಟ್ಟಣದ ವಿದ್ಯಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆ ನೀಡಿ ಮಾತನಾಡಿದರು. </p>.<p>‘ತಾಲ್ಲೂಕಿನಲ್ಲಿ ಎಚ್.ಟಿ.ಬಳಿಗಾರ್ ರಾಜಕೀಯ ಮಾಡಲಿಲ್ಲ. ಬದಲಿಗೆ ನೊಂದವರ ಪರವಾಗಿ ನಿಂತು ಅವರ ರಕ್ಷಣೆ ಮಾಡುತ್ತಿದ್ದರು. ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರ ಅಗಲಿಕೆಗೆ ಕೊರಗದೇ ಅವರ ಆಶಯ ಈಡೇರಿಸುವ ಕೆಲಸವನ್ನು ಫೌಂಡೇಶನ್ ಮೂಲಕ ಮಾಡಲಾಗುವುದು’ ಎಂದರು. </p>.<p>ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಶಿವಣ್ಣ ಬಿಎಸ್ಎನ್ಎಲ್, ಉಪಾಧ್ಯಕ್ಷ ರಸೂಲ್ಸಾಬ್, ರೇವಣಪ್ಪ, ನಾಗಪ್ಪ, ನಾಗಿಹಳ್ಳಿ, ನಾಗರಾಜ್ ಹಿರೇಜಂಬೂರು, ಟಿ.ಓಂಕಾರಪ್ಪ, ಐಶ್ವರ್ಯ, ಭೂಮಿಕಾ, ವಸತಿ ಶಾಲೆಯ ಮುಖ್ಯಸ್ಥ ಈರಪ್ಪ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>