<p><strong>ಕಾರ್ಗಲ್:</strong> ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರಕೃತಿ ದತ್ತವಾದ ಜಲಸಿರಿಯ ವೈಭವದೊಂದಿಗೆ, ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಸಾಲಿನಿಂದ ಶರಾವತಿ ಕಣಿವೆಯ ಆಳಕ್ಕೆ ಧುಮ್ಮಿಕ್ಕುತ್ತಿರುವ ರಮ್ಯ ನೋಟದ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಇಲ್ಲಿ ಭೇಟಿ ನೀಡಿದರು.</p><p>ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟ ಗುಡ್ಡಗಳಿಂದ ಹರಿಯುತ್ತಿರುವ ನೀರು ಶರಾವತಿ ನದಿ ಸೇರಿ ಜೋಗ ಜಲಪಾತದಲ್ಲಿ ಧುಮ್ಮಿಕ್ಕುತ್ತಿದೆ. ಸಿಂಹ ಘರ್ಜನೆಯೊಂದಿಗೆ ಬೃಹತ್ ಬಂಡೆಗಳ ಮೇಲೆ ಬಿದ್ದು ಹರಿಯುತ್ತಿರುವ ರೋರರ್, ಬಾಹ್ಯಾಕಾಶಕ್ಕೆ ನುಗ್ಗುವ ನೌಕೆಯಂತೆ ಕಂಗೊಳಿಸುತ್ತಿರುವ</p><p>ರಾಕೆಟ್, ಭೋರ್ಭಂಡೆಗಳ ಮೇಲೆ ನುಣುಪಾಗಿ ಜಾರುತ್ತಾ ಶರಾವತಿ ಕಣಿವೆಯಾಳಕ್ಕೆ ಸೇರಿಕೊಳ್ಳುವ ರಾಣಿ ಜಲಪಾತದ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸುತ್ತಿದೆ.</p><p>ಜೋಗ ಜಲಪಾತದತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. </p><p>ಜಲಪಾತದ ಪ್ರಮುಖ ವೀಕ್ಷಣಾ ಸ್ಥಳಗಳಾದ ಶಿವಮೊಗ್ಗ ಜಿಲ್ಲೆಯ ಸೀತಾಕಟ್ಟೆ ಸೇತುವೆಯಿಂದ ಕಾರ್ಗಲ್ – ಸಾಗರ ಮಾರ್ಗದ ಶಿರೂರು ಕೆರೆಯವರೆಗೂ ಅಂದಾಜು 3 ಕಿ.ಮೀ. ಉದ್ದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರು, ವಡನ್ ಬೈಲು ಮಾರ್ಗಗಳಿಂದ ಸಾವಿರಾರು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸುತ್ತಿದ್ದು, ವಾರಾಂತ್ಯದ ಕಾರಣ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಂಡಿದೆ.</p><p>ಜೋಗ ನಿರ್ವಹಣಾ ಪ್ರಾಧಿಕಾರದ ₹ 183 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿರುವುದರಿಂದ ಮೈಸೂರು ಬಂಗಲೆಯ ಮುಂಭಾಗದಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. </p><p>ಅಂದಾಜು 5 ಸಾವಿರಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸಿದ್ದು, ₹2 ಲಕ್ಷಕ್ಕೂ ಹೆಚ್ಚಿನ ಪ್ರವೇಶ ಶುಲ್ಕ ಭಾನುವಾರ ಸಂಗ್ರಹವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿದೆ.</p><p>ಜೋಗದ ರಾಣಿ ಫಾಲ್ಸ್ ನೆತ್ತಿಯ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಾರ್ಕಿಂಗ್ ಜಾಗದಲ್ಲಿ ಏಕ ಕಾಲಕ್ಕೆ 500 ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ‘ಆದಷ್ಟು ಬೇಗ ಲೋಕಾರ್ಪಣೆಗೊಂಡರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗಮನಹರಿಸಬೇಕು’ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಗಲ್:</strong> ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರಕೃತಿ ದತ್ತವಾದ ಜಲಸಿರಿಯ ವೈಭವದೊಂದಿಗೆ, ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಸಾಲಿನಿಂದ ಶರಾವತಿ ಕಣಿವೆಯ ಆಳಕ್ಕೆ ಧುಮ್ಮಿಕ್ಕುತ್ತಿರುವ ರಮ್ಯ ನೋಟದ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಇಲ್ಲಿ ಭೇಟಿ ನೀಡಿದರು.</p><p>ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟ ಗುಡ್ಡಗಳಿಂದ ಹರಿಯುತ್ತಿರುವ ನೀರು ಶರಾವತಿ ನದಿ ಸೇರಿ ಜೋಗ ಜಲಪಾತದಲ್ಲಿ ಧುಮ್ಮಿಕ್ಕುತ್ತಿದೆ. ಸಿಂಹ ಘರ್ಜನೆಯೊಂದಿಗೆ ಬೃಹತ್ ಬಂಡೆಗಳ ಮೇಲೆ ಬಿದ್ದು ಹರಿಯುತ್ತಿರುವ ರೋರರ್, ಬಾಹ್ಯಾಕಾಶಕ್ಕೆ ನುಗ್ಗುವ ನೌಕೆಯಂತೆ ಕಂಗೊಳಿಸುತ್ತಿರುವ</p><p>ರಾಕೆಟ್, ಭೋರ್ಭಂಡೆಗಳ ಮೇಲೆ ನುಣುಪಾಗಿ ಜಾರುತ್ತಾ ಶರಾವತಿ ಕಣಿವೆಯಾಳಕ್ಕೆ ಸೇರಿಕೊಳ್ಳುವ ರಾಣಿ ಜಲಪಾತದ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸುತ್ತಿದೆ.</p><p>ಜೋಗ ಜಲಪಾತದತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. </p><p>ಜಲಪಾತದ ಪ್ರಮುಖ ವೀಕ್ಷಣಾ ಸ್ಥಳಗಳಾದ ಶಿವಮೊಗ್ಗ ಜಿಲ್ಲೆಯ ಸೀತಾಕಟ್ಟೆ ಸೇತುವೆಯಿಂದ ಕಾರ್ಗಲ್ – ಸಾಗರ ಮಾರ್ಗದ ಶಿರೂರು ಕೆರೆಯವರೆಗೂ ಅಂದಾಜು 3 ಕಿ.ಮೀ. ಉದ್ದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರು, ವಡನ್ ಬೈಲು ಮಾರ್ಗಗಳಿಂದ ಸಾವಿರಾರು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸುತ್ತಿದ್ದು, ವಾರಾಂತ್ಯದ ಕಾರಣ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಂಡಿದೆ.</p><p>ಜೋಗ ನಿರ್ವಹಣಾ ಪ್ರಾಧಿಕಾರದ ₹ 183 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿರುವುದರಿಂದ ಮೈಸೂರು ಬಂಗಲೆಯ ಮುಂಭಾಗದಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. </p><p>ಅಂದಾಜು 5 ಸಾವಿರಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸಿದ್ದು, ₹2 ಲಕ್ಷಕ್ಕೂ ಹೆಚ್ಚಿನ ಪ್ರವೇಶ ಶುಲ್ಕ ಭಾನುವಾರ ಸಂಗ್ರಹವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿದೆ.</p><p>ಜೋಗದ ರಾಣಿ ಫಾಲ್ಸ್ ನೆತ್ತಿಯ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಾರ್ಕಿಂಗ್ ಜಾಗದಲ್ಲಿ ಏಕ ಕಾಲಕ್ಕೆ 500 ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ‘ಆದಷ್ಟು ಬೇಗ ಲೋಕಾರ್ಪಣೆಗೊಂಡರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗಮನಹರಿಸಬೇಕು’ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>