‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಶೀಘ್ರ ಮಂದಿರವೂ ಸಿದ್ಧವಾಗಲಿದೆ. ಈಗಿರುವುದು ಅದರ ನಿರ್ವಹಣೆಯ ಸವಾಲು. ಮತಾಂತರ ಹೊಂದುತ್ತಿರುವ ಹಿಂದೂ ಯುವಕರಿಂದಲೇ ಭವಿಷ್ಯದಲ್ಲಿ ಮಂದಿರಕ್ಕೆ ಆಪತ್ತು ಎದುರಾಗಬಹುದು. ಇಂತಹ ಆಪತ್ತುಗಳನ್ನು ನಿವಾರಿಸಲು ಈಗಲೇ ಸಿದ್ಧತೆಗಳು ಆರಂಭವಾಗಬೇಕು. ಮಕ್ಕಳಿಗೆ ದೇವರ ವೇಷಭೂಷಣ ತೊಡಿಸಬೇಕು. ಸಂಸ್ಕಾರ ಧಾರೆ ಎರೆಯಬೇಕು. ಮಾತೃ ಮಂಡಳಿ ಪ್ರಾಥಮಿಕ ಹಂತದಲ್ಲೇ ಇಂತಹ ಜವಾಬ್ದಾರಿ ನಿಭಾಯಿಸಬೇಕು. ಮಕ್ಕಳಲ್ಲಿ ಧರ್ಮ, ಸಂಸ್ಕೃತ ಭಾಷೆಯ ಅಭಿರುಚಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.