ಹೊಳೆಹೊನ್ನೂರು: ಸಮೀಪದ ಬಿ.ಬೀರನಹಳ್ಳಿಯ ಮನೆಯೊಂದಕ್ಕೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಬಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ದರ್ಶನ್ (22) ಹಾಗೂ ವಿಜಯ್ (23) ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಡ.11ರಂದು ಬಿ.ಬೀರನಹಳ್ಳಿಯ ಮನೆಯೊಂದರಲ್ಲಿ ₹ 25,000 ನಗದು ಸೇರಿ ₹ 1.13 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದರು.
ವೃತ್ತ ನಿರೀಕ್ಷಕ ಲಕ್ಷ್ಮೀಪತಿ ನೆತೃತ್ವದಲ್ಲಿ ಕಾನ್ಸ್ಟೆಬಲ್ಗಳಾದ ಲಿಂಗೇಗೌಡ, ಮಂಜುನಾಥ್, ವಿಶ್ವನಾಥ್, ಕುಮಾರ್ ಚಂದ್ರಶೇಖರ್, ಪ್ರಮೋದ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.