<p><strong>ತುಮಕೂರು:</strong> ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದಲ್ಲಿ ಭಾನುವಾರ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ, ಮಹಿಳೆಯರ ವಿಭಾಗದಲ್ಲಿ ಪ್ರಣತಿ ವೇಗದ ಓಟಗಾರರಾಗಿ ಹೊರ ಹೊಮ್ಮಿದರು.</p>.<p>ಪುರುಷರಿಗೆ 10 ಕಿಲೊ ಮೀಟರ್, ಮಹಿಳೆಯರಿಗೆ 5 ಕಿಲೊ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೂನಿಯರ್ ಕಾಲೇಜು ಮೈದಾನದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಎರಡು ವಿಭಾಗದಲ್ಲಿ 480 ಕ್ರೀಡಾಪಟುಗಳು ಭಾಗವಹಿಸಿದ್ದರು.</p>.<p>ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ ಮೊದಲ ಸ್ಥಾನ ಪಡೆದರೆ, ಜಯಾಷ್ ಪಾಟೀಲ್ ಎರಡು, ತುಮಕೂರಿನ ಟಿ.ಎಸ್.ಸಂದೀಪ್ ಮೂರು, ಬೆಂಗಳೂರಿನ ಗೋಪಿ ನಾಲ್ಕು, ಬಾಗಲಕೋಟೆಯ ಸಂಗಮೇಶ್ ಹಳ್ಳಿ ಐದು ಹಾಗೂ ಬಾದಾಮಿಯ ಪ್ರಭು ಲಮಾಣಿ ಆರನೇ ಸ್ಥಾನ ಪಡೆದರು.</p>.<p>ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಪ್ರಣತಿ ಪ್ರಥಮ, ಸೀಮಾ ದ್ವಿತೀಯ, ಶಿವಮೊಗ್ಗದ ಎಚ್.ವಿ.ದೀಕ್ಷಾ ತೃತೀಯ, ಕೋಲಾರದ ಎಂ.ಸಾಹಿತ್ಯ ನಾಲ್ಕು, ಬೆಂಗಳೂರಿನ ಲಾವಣ್ಯ ಐದು ಮತ್ತು ತುಮಕೂರಿನ ಎ.ಆರ್.ಜೀವಿತ ಆರನೇ ಸ್ಥಾನ ತಮ್ಮದಾಗಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದಲ್ಲಿ ಭಾನುವಾರ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ, ಮಹಿಳೆಯರ ವಿಭಾಗದಲ್ಲಿ ಪ್ರಣತಿ ವೇಗದ ಓಟಗಾರರಾಗಿ ಹೊರ ಹೊಮ್ಮಿದರು.</p>.<p>ಪುರುಷರಿಗೆ 10 ಕಿಲೊ ಮೀಟರ್, ಮಹಿಳೆಯರಿಗೆ 5 ಕಿಲೊ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೂನಿಯರ್ ಕಾಲೇಜು ಮೈದಾನದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಎರಡು ವಿಭಾಗದಲ್ಲಿ 480 ಕ್ರೀಡಾಪಟುಗಳು ಭಾಗವಹಿಸಿದ್ದರು.</p>.<p>ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ ಮೊದಲ ಸ್ಥಾನ ಪಡೆದರೆ, ಜಯಾಷ್ ಪಾಟೀಲ್ ಎರಡು, ತುಮಕೂರಿನ ಟಿ.ಎಸ್.ಸಂದೀಪ್ ಮೂರು, ಬೆಂಗಳೂರಿನ ಗೋಪಿ ನಾಲ್ಕು, ಬಾಗಲಕೋಟೆಯ ಸಂಗಮೇಶ್ ಹಳ್ಳಿ ಐದು ಹಾಗೂ ಬಾದಾಮಿಯ ಪ್ರಭು ಲಮಾಣಿ ಆರನೇ ಸ್ಥಾನ ಪಡೆದರು.</p>.<p>ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಪ್ರಣತಿ ಪ್ರಥಮ, ಸೀಮಾ ದ್ವಿತೀಯ, ಶಿವಮೊಗ್ಗದ ಎಚ್.ವಿ.ದೀಕ್ಷಾ ತೃತೀಯ, ಕೋಲಾರದ ಎಂ.ಸಾಹಿತ್ಯ ನಾಲ್ಕು, ಬೆಂಗಳೂರಿನ ಲಾವಣ್ಯ ಐದು ಮತ್ತು ತುಮಕೂರಿನ ಎ.ಆರ್.ಜೀವಿತ ಆರನೇ ಸ್ಥಾನ ತಮ್ಮದಾಗಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>