‘12 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು ಸಲ್ಲಿಸಿರುವ ವರದಿಯ ಆಧಾರದಲ್ಲಿ ಕಾರ್ಕಳವನ್ನು ಸ್ಪರ್ಧೆಗೆ ಅಯ್ಕೆ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿದ್ದು ಅದರ ವಿರುದ್ಧ ಹೋರಾಟ ಹಾಗೂ ಹಿಂದುತ್ವವೇ ನನ್ನ ಧ್ಯೇಯ. ಕಾರ್ಕಳದಲ್ಲಿ ಫೆಬ್ರುವರಿ 5ರಂದು ಕಾರ್ಯಾಲಯ ಉದ್ಘಾಟನೆಯಾಗಲಿದ್ದು ಕಲಬುರಗಿ ಜಿಲ್ಲೆ ಆಂದೋಲದ ಸಿದ್ಧಲಿಂಗ ಶ್ರೀ ಸೇರಿದಂತೆ ಎಂಟಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿ ಗೋಪೂಜೆ ನೆರವೇರಿಸಲಿದ್ದಾರೆ’ ಎಂದರು.