ಸುಂಕಸಾಳ, ಡೊಂಗ್ರಿ, ವಾಸರ ಕುದ್ರಿಗೆ, ಮೊಗಟಾ ಬೆಳಸೆ, ಶೆಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳು ಜಲಾವೃತವಾಗಿವೆ. ಸುಂಕಸಾಳದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ಇದರಿಂದ ಯಲ್ಲಾಪುರದ ಮೂಲಕ ಕರಾವಳಿಗೆ ಸಂಪರ್ಕ ಕಡಿತಗೊಂಡಿದೆ. ಹಾಲು, ತರಕಾರಿ ಪತ್ರಿಕೆಗಳು ಈ ಹೆದ್ದಾರಿಯಲ್ಲೇ ಕರಾವಳಿಗೆ ರವಾನೆಯಾಗುತ್ತವೆ. ಸುಂಕಸಾಳದಲ್ಲಿ ಪೆಟ್ರೋಲ್ ಪಂಪ್ ಮುಳುಗಡೆಯಾಗಿದೆ.