ಹಲವು ತಲೆಮಾರುಗಳಿಂದ ದೇವಸ್ಥಾನಕ್ಕೆ ನಡೆದುಕೊಂಡ ಬಂದ ಭಕ್ತರು, ಕಷ್ಟ ಕಾಲದಲ್ಲಿ ಹರಕೆ ಹೊತ್ತ ಮಹಿಳೆಯರು ಸೇರಿದಂತೆ ಎಲ್ಲರೂ ಕೆಂಡಸೇವೆಯಲ್ಲಿ ಭಾಗಿಯಾದರು. ಮುಂಜಾನೆಯೇ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಿಗೆಗಳಿಗೆ ಬೆಂಕಿ ಹಾಕಿ ಸಿದ್ದಪಡಿಸಿದ ಕೆಂಡದಲ್ಲಿ ಭಕ್ತಾಧಿಗಳು ಪೂಜಾರಿಗಳ ನೇತೃತ್ವದಲ್ಲಿ ಕೆಂಡ ಸೇವೆಯನ್ನು ನೇರವೇರಿಸಿದರು.