ಪಾವಗಡದಂತೆಯೇ ಮತ್ತೊಂದು ಯೋಜನೆಗೆ ಒತ್ತಡ
‘ಹೊಸಪೇಟೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಪಾವಗಡ ಯೋಜನೆಯಂತೆಯೇ ಜಲಾಶಯದ ಹಿನ್ನೀರಿನಿಂದಲೇ ನೀರೆತ್ತುವಂತಹ ಇನ್ನೊಂದು ಪ್ರತ್ಯೇಕ ಯೋಜನೆಗೆ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಅದಕ್ಕೆ ಸಮ್ಮತಿ ಸಿಗುವ ಆಶಯ ಇದೆ. ಹೀಗಾದರೆ ನಿರಂತರ 6 ತಿಂಗಳು ನೀರು ಎತ್ತುವುದು ಸಾಧ್ಯವಾಗಲಿದೆ ಹಾಗೂ ಜಲಾಶಯ ಸಮೀಪದ ಹೊಸಪೇಟೆ ತಾಲ್ಲೂಕಿನ ಇತರೆಡೆ ಜಲಸಮೃದ್ಧಿ ಆಗಲಿದೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.