ಕೋವಿಡ್ ವಾರ್ಡ್, ಎಮರ್ಜೆನ್ಸಿ ವಾರ್ಡ್, ಹೆರಿಗೆ ವಾರ್ಡ್, ರಾತ್ರಿ ಪಾಳಿ ಸೇವೆಗಳು ಅಲ್ಲದೇ, ನಿಯೋಜನೆ ಮೇರೆಗೆ ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಕಳುಹಿಸುತ್ತಾರೆ. ಇಷ್ಟೆಲ್ಲ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಸರಿಯಾದ ಪ್ರಯಾಣ ಭತ್ಯೆ, ಸೇವೆ ಭತ್ಯೆ ನೀಡುವುದಿಲ್ಲ ಎಂದುಆಯುಷ್ ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಬಿ.ಹಂಪನಗೌಡ ದೂರಿದರು.