ನಿರ್ದೇಶಕ ತರುಣ ಸುಧೀರ್ ಮಾತನಾಡಿ, ರಾಜೂಗೌಡರ ಅಧಿಕಾರಾವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಆರಂಭವಾಗಿದ್ದರು. ಕಳೆದ ಬಾರಿ ಸೋತಿರುವ ಕಾರಣಕ್ಕೆ ಅವೆಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರೈತರು, ಜನಪರ ಕಾಳಜಿ ಹೊಂದಿರುವ ರಾಜೂಗೌಡ ಅವರನ್ನು ಗೆಲ್ಲಿಸಬೇಕು. ಜತೆಗೆ ದೇಶದ ಅಭಿವೃದ್ಧಿ ಹಾಗೂ ಸುಭದ್ರತೆಗಾಗಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಅವರನ್ನು ಕೂಡ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.