<p><strong>ಹುಣಸಗಿ:</strong> ‘ಕಳೆದ ನಾಲ್ಕು ದಶಕಗಳ ಹಿಂದೆ ತಾವು ಕಲಿತ ಶಾಲೆ ಹಾಗೂ ಗುರುಗಳನ್ನು ಸ್ಮರಿಸಿಕೊಂಡು ಅವರನ್ನು ಮತ್ತೆ ಕರೆಸಿ ಎಲ್ಲರೂ ಒಂದಾಗಿ ನೋಡುವಂತೆ ಮಾಡಿದ ಕಾರ್ಯ ಅವಿಸ್ಮರಣಿಯ’ ಎಂದು ನಿವೃತ್ತ ಶಿಕ್ಷಕ ಎಂ.ಎನ್ ನಾಗೇಂದ್ರಪ್ಪ ಹೇಳಿದರು.</p>.<p>ಹುಣಸಗಿ ಪಟ್ಟಣದ ಮಾತೋಶ್ರೀ ಸುಬ್ಬಮ್ಮಗೌಡತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>ತಾವು ಕಲಿಯುವಾಗ ಚಿಕ್ಕ ಮಕ್ಕಳು, ಈಗ ಒಬ್ಬೊಬ್ಬರು ಒಂದೊಂದು ಮಹತ್ವದ ಸ್ಥಾನದಲ್ಲಿದ್ದಿರಿ. ಈ ಕ್ಷಣ ಅತ್ಯಂತ ಹೆಮ್ಮೆಯಿಂದ ಕೂಡಿದೆ ಎಂದರು.</p>.<p>ನಿವೃತ್ತ ಶಿಕ್ಷಕಿ ಚಿತ್ರಲೇಖಾ ಟೆಂಗಳೇಕರ್ ಹಾಗೂ ಕ್ಷಾಮಾ ರಾಯಚೂರು ಮಾತನಾಡಿ, ಜೀವನದ ಸಂಧ್ಯಾ ಕಾಲದಲ್ಲಿರುವ ನಮಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಂತೃಪ್ತಿ ತಂದುಕೊಡುತ್ತವೆ ಎಂದರು.</p>.<p>ಈ ಸಂದರ್ಭದಲ್ಲಿ ಸುಲೋಚನಾ ಬಾಸುತ್ಕರ್, ಸಂಗನಗೌಡ ಪಾಟೀಲ, ಡಿ.ಎಂ ಮಗದೂಮ್, ಶಂಕರಗೌಡ ಪಾಟೀಲ ಸೇರಿದಂತೆ 8 ಜನ ಶಿಕ್ಷಕರನ್ನು ಸನ್ಮಾನಿಸಿ ಗುರುಕಾಣಿಕೆ ನೀಡಿ ಗೌರವಿಸಲಾಯಿತು.</p>.<p>ಸುಮಾರು 50 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಸುಶೀಲಾ ಕುಲಕರ್ಣಿ, ಜಮೀರ್ ಅಹಮ್ಮದ, ಶರಣಯ್ಯ ಹಿರೇಮಠ, ವ್ಯಾಸರಾಜ ಜಮದರಖಾನ್, ಸುರೇಶ ಕಕ್ಕಳಮೇಲಿ, ರೇಖಾ ಬಳಿ, ಪಾರ್ವತಿ ಮೇಲಿನಮನಿ, ಶಿವಕುಮಾರ ಬಂಡೋಳಿ, ಅಮರೇಶ ಸಜ್ಜನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ‘ಕಳೆದ ನಾಲ್ಕು ದಶಕಗಳ ಹಿಂದೆ ತಾವು ಕಲಿತ ಶಾಲೆ ಹಾಗೂ ಗುರುಗಳನ್ನು ಸ್ಮರಿಸಿಕೊಂಡು ಅವರನ್ನು ಮತ್ತೆ ಕರೆಸಿ ಎಲ್ಲರೂ ಒಂದಾಗಿ ನೋಡುವಂತೆ ಮಾಡಿದ ಕಾರ್ಯ ಅವಿಸ್ಮರಣಿಯ’ ಎಂದು ನಿವೃತ್ತ ಶಿಕ್ಷಕ ಎಂ.ಎನ್ ನಾಗೇಂದ್ರಪ್ಪ ಹೇಳಿದರು.</p>.<p>ಹುಣಸಗಿ ಪಟ್ಟಣದ ಮಾತೋಶ್ರೀ ಸುಬ್ಬಮ್ಮಗೌಡತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>ತಾವು ಕಲಿಯುವಾಗ ಚಿಕ್ಕ ಮಕ್ಕಳು, ಈಗ ಒಬ್ಬೊಬ್ಬರು ಒಂದೊಂದು ಮಹತ್ವದ ಸ್ಥಾನದಲ್ಲಿದ್ದಿರಿ. ಈ ಕ್ಷಣ ಅತ್ಯಂತ ಹೆಮ್ಮೆಯಿಂದ ಕೂಡಿದೆ ಎಂದರು.</p>.<p>ನಿವೃತ್ತ ಶಿಕ್ಷಕಿ ಚಿತ್ರಲೇಖಾ ಟೆಂಗಳೇಕರ್ ಹಾಗೂ ಕ್ಷಾಮಾ ರಾಯಚೂರು ಮಾತನಾಡಿ, ಜೀವನದ ಸಂಧ್ಯಾ ಕಾಲದಲ್ಲಿರುವ ನಮಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಂತೃಪ್ತಿ ತಂದುಕೊಡುತ್ತವೆ ಎಂದರು.</p>.<p>ಈ ಸಂದರ್ಭದಲ್ಲಿ ಸುಲೋಚನಾ ಬಾಸುತ್ಕರ್, ಸಂಗನಗೌಡ ಪಾಟೀಲ, ಡಿ.ಎಂ ಮಗದೂಮ್, ಶಂಕರಗೌಡ ಪಾಟೀಲ ಸೇರಿದಂತೆ 8 ಜನ ಶಿಕ್ಷಕರನ್ನು ಸನ್ಮಾನಿಸಿ ಗುರುಕಾಣಿಕೆ ನೀಡಿ ಗೌರವಿಸಲಾಯಿತು.</p>.<p>ಸುಮಾರು 50 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಸುಶೀಲಾ ಕುಲಕರ್ಣಿ, ಜಮೀರ್ ಅಹಮ್ಮದ, ಶರಣಯ್ಯ ಹಿರೇಮಠ, ವ್ಯಾಸರಾಜ ಜಮದರಖಾನ್, ಸುರೇಶ ಕಕ್ಕಳಮೇಲಿ, ರೇಖಾ ಬಳಿ, ಪಾರ್ವತಿ ಮೇಲಿನಮನಿ, ಶಿವಕುಮಾರ ಬಂಡೋಳಿ, ಅಮರೇಶ ಸಜ್ಜನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>