<p><strong>ಯಾದಗಿರಿ:</strong> ಜಿಲ್ಲೆಯಾದ್ಯಂತ ಪ್ರವಾದಿ ಮುಹಮ್ಮದ್ರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.</p>.<p>ಮನೆಗಳಲ್ಲಿ ನಮಾಜ್ ಮಾಡಿದರು. ‘ಶಿರ್ ಕುರ್ಮಾ’ ಸಿಹಿ ಪಾಯಸವನ್ನು ಅಕ್ಕ ಪಕ್ಕದವರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಚಿಣ್ಣರು ಹೊಸಬಟ್ಟೆ ತೊಟ್ಟು ನಮಾಜಿನಲ್ಲಿ ಪೋಷಕರೊಂದಿಗೆ ಪಾಲ್ಗೊಂಡಿದ್ದರು.</p>.<p>ಮಹಿಳೆಯರು ಸಿಹಿ ಊಟ ತಯಾರಿಸುವುದು, ಬಂಧುಗಳಿಗೆ ಊಟ ನೀಡುವುದು ಮಾಡುತ್ತಿದ್ದರು.</p>.<p class="Subhead">ಮೆರವಣಿಗೆ ರದ್ದು: ಕಳೆದ ವರ್ಷ ಮೆಕ್ಕಾ, ಮದೀನಾ, ನಕ್ಷತ್ರ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿತ್ತು. ಡಿ.ಜೆ. ಸೌಂಡ್ ಮೂಲಕ ಚಕ್ರಕಟ್ಟಾದಿಂದ ಆರಂಭವಾಗಿ ನಗರದ ವಿವಿಧೆಡೆ ಸಂಚಾರ ಮಾಡಿತ್ತು. ಆದರೆ, ಈ ಬಾರಿ ಕೋವಿಡ್ ಕಾರಣದಿಂದ ಜಿಲ್ಲಾಡಳಿತ ಮೆರವಣಿಗೆ ನಿಷೇಧಿಸಿತ್ತು. ಮೆರವಣಿಗೆಗೆ ಅನುಮತಿ ನೀಡಿಲ್ಲ. ಹೀಗಾಗಿ ಮನೆಗಳಲ್ಲಿ ನಮಾಜ್ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.</p>.<p class="Subhead">ಜಗಮಗಿಸುವ ವಿದ್ಯುತ್ ದೀಪಾಲಂಕಾರ: ನಗರದ ವಿವಿಧ ಮಸೀದಿ, ದರ್ಗಾಗಳಲ್ಲಿಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ.</p>.<p class="Subhead"><strong>ಅಂಗಡಿ, ಮುಂಗಟ್ಟು ಬಂದ್:</strong></p>.<p>ಶುಕ್ರವಾರ ಬಹುತೇಕ ಅಂಗಡಿ, ಮುಂಗಟ್ಟು ಬಂದ್ ಆಗಿದ್ದವು. ಎಲ್ಲ ಕಡೆ ಮುಸ್ಲಿಮರು ಅಂಗಡಿ ಮುಂಗಟ್ಟು ನಡೆಸುತ್ತಿದ್ದರಿಂದ ಮುಚ್ಚಿರುವುದು ಕಂಡು ಬಂದಿತು.</p>.<p class="Subhead">ಹಣ್ಣು, ಬಿಸ್ಕತ್, ಬ್ರೆಡ್ ವಿತರಣೆ: ಜಿಲ್ಲಾಸ್ಪತ್ರೆಯಲ್ಲಿ ಮೋಸಿನ್ ವೇಲ್ಫೆರ್ ಫೌಂಡೇಷನ್ ವತಿಯಿಂದ ರೋಗಿಗಳಿಗೆ ಹಣ್ಣು, ಬಿಸ್ಕತ್, ಬ್ರೆಡ್ ವಿತರಣೆ ಮಾಡಿದರು.</p>.<p>ಮೋಸಿನ್ಕಾಯನಾಥ ವೇಲ್ಫೆರ್ ಫೌಂಡೇಷನ್ ವತಿಯಿಂದ ಹಲವಾರು ವರ್ಷಗಳಿಂದ ನಗರದ ಎಲ್ಲಾ ಆಸ್ಪತ್ರೆಗಳಿಗೆ ಹಣ್ಣು ಹಂಪಲು ವಿತರಿಸುತ್ತಾ ಬಂದಿದ್ದಾರೆ.ಫೌಂಡೇಷನ್ ಅಧ್ಯಕ್ಷ ನೂರುಲ್ ಹಸನ್, ಅಬ್ದುಲ್ ಬಾರಿ, ಅಬ್ದುಲ್ ವಾಹೇದ್, ಬಾಬಾ ಇದ್ದರು.</p>.<p>ಕರ್ನಾಟಕ ಅಹಲೆಸುನ್ನತ್ ಜಮಾತ್ವತಿಯಿಂದ ಈದ್ ಮಿಲಾದ್ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಅಧ್ಯಕ್ಷ ಖಾಜಿ ಅಬ್ಜಲೋದ್ದೀನ್ ಸಿದ್ಧಿಕಿ, ಅಬರಾರ ಅಹಮದ್, ವಕೀಲರಾದ ಇಮತೀಹಾಜೋದ್ದಿನ್, ಡಾ. ಮೊಬಸೀರ್ ಅಹಮದ್ ಸಾಜೀದ್ ಇದ್ದರು.</p>.<p>***</p>.<p><strong>ಮುಸ್ಲಿಂ ಯುವ ಬಳಗದಿಂದ ರಕ್ತದಾನ</strong></p>.<p>ಯಾದಗಿರಿ: ನಗರದ ಮುಸ್ಲಿಂ ಯುವ ಬಳಗ ಹಾಗೂ ಡಾ. ಸುರಗಿಮಠ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ನಗರದ ಹತ್ತಿಕುಣಿ ಕ್ರಾಸ್ ಬಳಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ನಗರದ ಯುವಕರು ಶಿಬಿರದಲ್ಲಿಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.</p>.<p>ಈ ವೇಳೆ ಡಾ. ಸುರಗಿಮಠ ಹಾಗೂ ಫರ್ವೆಜ್ ಪಟೇಲ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ಶಿಬಿರದ ಮೂಲಕ ಸಂಗ್ರಹಿಸಿದ ರಕ್ತ ಸಹಾಯಕವಾಗಲಿ ಎಂಬ ದೃಷ್ಟಿಕೋನದಿಂದ ಏರ್ಪಡಿಸಿದ್ದೇವೆ. ನಿರೀಕ್ಷೆಗೂ ಮೀರಿ ಯುವಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.</p>.<p>ಶಿಬಿರದಲ್ಲಿ ಯುವ ಬಳಗದ ಸಿರಾಜ್ ರಜ್ವಿ, ಶೇಖ್ ಖಮರಲ್ ಇಸ್ಲಾಂ, ಇಮ್ರಾನ್ ಸಗರಿ, ರಿಯಾಜ್, ಆರಿಫ್ ಸಗರಿ ಸೇರಿದಂತೆ ರಕ್ತನಿಧಿ ಕೇಂದ್ರದ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜಿಲ್ಲೆಯಾದ್ಯಂತ ಪ್ರವಾದಿ ಮುಹಮ್ಮದ್ರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.</p>.<p>ಮನೆಗಳಲ್ಲಿ ನಮಾಜ್ ಮಾಡಿದರು. ‘ಶಿರ್ ಕುರ್ಮಾ’ ಸಿಹಿ ಪಾಯಸವನ್ನು ಅಕ್ಕ ಪಕ್ಕದವರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಚಿಣ್ಣರು ಹೊಸಬಟ್ಟೆ ತೊಟ್ಟು ನಮಾಜಿನಲ್ಲಿ ಪೋಷಕರೊಂದಿಗೆ ಪಾಲ್ಗೊಂಡಿದ್ದರು.</p>.<p>ಮಹಿಳೆಯರು ಸಿಹಿ ಊಟ ತಯಾರಿಸುವುದು, ಬಂಧುಗಳಿಗೆ ಊಟ ನೀಡುವುದು ಮಾಡುತ್ತಿದ್ದರು.</p>.<p class="Subhead">ಮೆರವಣಿಗೆ ರದ್ದು: ಕಳೆದ ವರ್ಷ ಮೆಕ್ಕಾ, ಮದೀನಾ, ನಕ್ಷತ್ರ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿತ್ತು. ಡಿ.ಜೆ. ಸೌಂಡ್ ಮೂಲಕ ಚಕ್ರಕಟ್ಟಾದಿಂದ ಆರಂಭವಾಗಿ ನಗರದ ವಿವಿಧೆಡೆ ಸಂಚಾರ ಮಾಡಿತ್ತು. ಆದರೆ, ಈ ಬಾರಿ ಕೋವಿಡ್ ಕಾರಣದಿಂದ ಜಿಲ್ಲಾಡಳಿತ ಮೆರವಣಿಗೆ ನಿಷೇಧಿಸಿತ್ತು. ಮೆರವಣಿಗೆಗೆ ಅನುಮತಿ ನೀಡಿಲ್ಲ. ಹೀಗಾಗಿ ಮನೆಗಳಲ್ಲಿ ನಮಾಜ್ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.</p>.<p class="Subhead">ಜಗಮಗಿಸುವ ವಿದ್ಯುತ್ ದೀಪಾಲಂಕಾರ: ನಗರದ ವಿವಿಧ ಮಸೀದಿ, ದರ್ಗಾಗಳಲ್ಲಿಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ.</p>.<p class="Subhead"><strong>ಅಂಗಡಿ, ಮುಂಗಟ್ಟು ಬಂದ್:</strong></p>.<p>ಶುಕ್ರವಾರ ಬಹುತೇಕ ಅಂಗಡಿ, ಮುಂಗಟ್ಟು ಬಂದ್ ಆಗಿದ್ದವು. ಎಲ್ಲ ಕಡೆ ಮುಸ್ಲಿಮರು ಅಂಗಡಿ ಮುಂಗಟ್ಟು ನಡೆಸುತ್ತಿದ್ದರಿಂದ ಮುಚ್ಚಿರುವುದು ಕಂಡು ಬಂದಿತು.</p>.<p class="Subhead">ಹಣ್ಣು, ಬಿಸ್ಕತ್, ಬ್ರೆಡ್ ವಿತರಣೆ: ಜಿಲ್ಲಾಸ್ಪತ್ರೆಯಲ್ಲಿ ಮೋಸಿನ್ ವೇಲ್ಫೆರ್ ಫೌಂಡೇಷನ್ ವತಿಯಿಂದ ರೋಗಿಗಳಿಗೆ ಹಣ್ಣು, ಬಿಸ್ಕತ್, ಬ್ರೆಡ್ ವಿತರಣೆ ಮಾಡಿದರು.</p>.<p>ಮೋಸಿನ್ಕಾಯನಾಥ ವೇಲ್ಫೆರ್ ಫೌಂಡೇಷನ್ ವತಿಯಿಂದ ಹಲವಾರು ವರ್ಷಗಳಿಂದ ನಗರದ ಎಲ್ಲಾ ಆಸ್ಪತ್ರೆಗಳಿಗೆ ಹಣ್ಣು ಹಂಪಲು ವಿತರಿಸುತ್ತಾ ಬಂದಿದ್ದಾರೆ.ಫೌಂಡೇಷನ್ ಅಧ್ಯಕ್ಷ ನೂರುಲ್ ಹಸನ್, ಅಬ್ದುಲ್ ಬಾರಿ, ಅಬ್ದುಲ್ ವಾಹೇದ್, ಬಾಬಾ ಇದ್ದರು.</p>.<p>ಕರ್ನಾಟಕ ಅಹಲೆಸುನ್ನತ್ ಜಮಾತ್ವತಿಯಿಂದ ಈದ್ ಮಿಲಾದ್ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಅಧ್ಯಕ್ಷ ಖಾಜಿ ಅಬ್ಜಲೋದ್ದೀನ್ ಸಿದ್ಧಿಕಿ, ಅಬರಾರ ಅಹಮದ್, ವಕೀಲರಾದ ಇಮತೀಹಾಜೋದ್ದಿನ್, ಡಾ. ಮೊಬಸೀರ್ ಅಹಮದ್ ಸಾಜೀದ್ ಇದ್ದರು.</p>.<p>***</p>.<p><strong>ಮುಸ್ಲಿಂ ಯುವ ಬಳಗದಿಂದ ರಕ್ತದಾನ</strong></p>.<p>ಯಾದಗಿರಿ: ನಗರದ ಮುಸ್ಲಿಂ ಯುವ ಬಳಗ ಹಾಗೂ ಡಾ. ಸುರಗಿಮಠ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ನಗರದ ಹತ್ತಿಕುಣಿ ಕ್ರಾಸ್ ಬಳಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ನಗರದ ಯುವಕರು ಶಿಬಿರದಲ್ಲಿಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.</p>.<p>ಈ ವೇಳೆ ಡಾ. ಸುರಗಿಮಠ ಹಾಗೂ ಫರ್ವೆಜ್ ಪಟೇಲ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ಶಿಬಿರದ ಮೂಲಕ ಸಂಗ್ರಹಿಸಿದ ರಕ್ತ ಸಹಾಯಕವಾಗಲಿ ಎಂಬ ದೃಷ್ಟಿಕೋನದಿಂದ ಏರ್ಪಡಿಸಿದ್ದೇವೆ. ನಿರೀಕ್ಷೆಗೂ ಮೀರಿ ಯುವಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.</p>.<p>ಶಿಬಿರದಲ್ಲಿ ಯುವ ಬಳಗದ ಸಿರಾಜ್ ರಜ್ವಿ, ಶೇಖ್ ಖಮರಲ್ ಇಸ್ಲಾಂ, ಇಮ್ರಾನ್ ಸಗರಿ, ರಿಯಾಜ್, ಆರಿಫ್ ಸಗರಿ ಸೇರಿದಂತೆ ರಕ್ತನಿಧಿ ಕೇಂದ್ರದ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>