‘ಸುರೇಶ್ ಬೇಕೋ ವೈಟ್ ಕಾಲರ್ ಡಾಕ್ಟರ್ ಬೇಕೋ?’
‘ಸುರೇಶ್ ಅವರು ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಜನರ ನಡುವೆ ನಿಂತು ಕಷ್ಟ–ಸುಖಗಳಿಗೆ ಸ್ಪಂದಿಸುವ ಸುರೇಶ್ ಬೇಕೋ ಅಥವಾ ವೈಟ್ ಕಾಲರ್ ಡಾಕ್ಟರ್ ಮಂಜುನಾಥ್ ಬೇಕೋ ಎಂದು ಕ್ಷೇತ್ರದ ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಸುರೇಶ್ ಗೆಲುವು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ‘ದೇವೇಗೌಡರು ಪ್ರಧಾನಿ ಸಿ.ಎಂ ಆಗಿದ್ದರು. ಎಚ್.ಡಿ. ಕುಮಾರಸ್ವಾಮಿ ಎರಡು ಸಲ ಸಿ.ಎಂ ಆಗಿದ್ದರು. ಆದರೂ ಈ ಕ್ಷೇತ್ರದಲ್ಲಿ ಮನೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.