<p><strong>ಬೆಂಗಳೂರು:</strong> ಸಂವಿಧಾನವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಭಾರತವನ್ನು ಮುಸ್ಲಿಮರ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ, ಆದರೆ ಅಧಿಕೃತವಾಗಿ ಘೋಷಣೆ ಮಾಡಲಾಗಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. </p><p>ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.</p><p>* ಆರ್ಟಿಕಲ್ 25, 28, 30 ಅನ್ನು ಸೇರಿಸಲಾಯಿತು. </p><p>* 1951ರಲ್ಲಿ ಹಿಂದೂ ರಿಲಿಜಿಯಸ್ ಅಂಡ್ ಚಾರಿಟೇಬಲ್ ಎಂಡೋಮೆನ್ಟ್ಸ್ ಆಕ್ಟ್ ಜಾರಿಗೆ ತರಲಾಯಿತು.</p><p>* 1956ರಲ್ಲಿ ಎಚ್ಸಿಬಿ ಕಾಯ್ದೆಯನ್ನು ಪರಿಚಯಿಸಿತು.</p><p>* 1975ರಲ್ಲಿ ಜಾತ್ಯತೀತತೆ ಎಂಬ ಪದವನ್ನು ಸೇರಿಸಿತು. </p><p>* 1992 ರಲ್ಲಿ ಸೆಕ್ಯುಲರಿಸಂ ಕಾಯ್ದೆಯನ್ನು ಪರಿಚಯಿಸಿತು.</p><p>* 1991ರಲ್ಲಿ POW ಕಾಯ್ದೆಯನ್ನು ಪರಿಚಯಿಸಿತು.</p><p>* 1995ರಲ್ಲಿ ವಕ್ಫ್ ಕಾಯ್ದೆಯನ್ನು ಪರಿಚಯಿಸಿತು.</p><p>* 2007ರಲ್ಲಿ ರಾಮ ಸೇತು ಟ್ರಸ್ಟ್ ಅನ್ನು ಪ್ರಾರಂಭಿಸಿತು. </p>.<h2>ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ?</h2><p>* ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು. </p><p>* ಆರ್ಟಿಕಲ್ 28ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು. </p><p>* HRCE Act 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡರು.</p><p>* ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು; ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ. ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚಾಯಿತು. </p><p>* 1951ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಪರಿಚಯಿಸುವ ಮೂಲಕ ಮುಸ್ಲಿಂ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು.</p><p>* 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು. ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ಕಳುಹಿಸಿದ್ದು ಇದೆ ಕಾಂಗ್ರೆಸ್ ಪಕ್ಷ. </p><p>* ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40,000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು. </p><p>* ವಕ್ಫ್ ಕಾಯಿದೆ ಮೂಲಕ ಮುಸ್ಲಿಮರು ಯಾವುದೇ ಭೂಮಿಯನ್ನು ತೆಗೆದುಕೊಳ್ಳುವ ಹಕ್ಕನ್ನು ಪಡೆದರು. </p><p>* 2009ರಲ್ಲಿ ಕೇಸರಿ ಭಯೋತ್ಪಾದನೆ (Saffron Terrorism) ಎಂಬ ಪದಪುಂಜವನ್ನು ಪರಿಚಯಿಸಿದರು.</p><p>* ಮಸೀದಿಗಳು ಮತ್ತು ಚರ್ಚ್ಗಳಿಗೆ ಸರ್ಕಾರದ ನಿಯಂತ್ರಣವಿಲ್ಲ, ಆದರೆ ಹಿಂದೂ ದೇವಾಲಯಗಳಿಗೆ ಇದೆ. </p><p>* ಸರ್ಕಾರಿ ಅನುದಾನಿತ ಮದರಸ ಇದೆ. ಆದರೆ, ಸರ್ಕಾರಿ ಅನುದಾನಿತ ಗುರುಕುಲಗಳಿಲ್ಲ.</p><p>* ವಕ್ಫ್ ಆಕ್ಟ್ ಇದೆ. ಆದರೆ, ಹಿಂದೂ ಭೂಮಿ ಕಾಯ್ದೆಯಿಲ್ಲ</p><p>ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಸಮಯ ಬಂದಿದೆ. ಈ ಚುನಾವಣೆ ಸನಾತನ ಧರ್ಮಕ್ಕೆ ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶವಾಗಿದೆ. ಸನಾತನ ಧರ್ಮ ಉಳಿಯಬೇಕಾದರೆ, ಹಿಂದೂಗಳಿಗೆ ಸಮಾನ ಹಕ್ಕು ಸಿಗಬೇಕಾದರೆ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಎಂದು ಬರೆದುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಂವಿಧಾನವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಭಾರತವನ್ನು ಮುಸ್ಲಿಮರ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ, ಆದರೆ ಅಧಿಕೃತವಾಗಿ ಘೋಷಣೆ ಮಾಡಲಾಗಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. </p><p>ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.</p><p>* ಆರ್ಟಿಕಲ್ 25, 28, 30 ಅನ್ನು ಸೇರಿಸಲಾಯಿತು. </p><p>* 1951ರಲ್ಲಿ ಹಿಂದೂ ರಿಲಿಜಿಯಸ್ ಅಂಡ್ ಚಾರಿಟೇಬಲ್ ಎಂಡೋಮೆನ್ಟ್ಸ್ ಆಕ್ಟ್ ಜಾರಿಗೆ ತರಲಾಯಿತು.</p><p>* 1956ರಲ್ಲಿ ಎಚ್ಸಿಬಿ ಕಾಯ್ದೆಯನ್ನು ಪರಿಚಯಿಸಿತು.</p><p>* 1975ರಲ್ಲಿ ಜಾತ್ಯತೀತತೆ ಎಂಬ ಪದವನ್ನು ಸೇರಿಸಿತು. </p><p>* 1992 ರಲ್ಲಿ ಸೆಕ್ಯುಲರಿಸಂ ಕಾಯ್ದೆಯನ್ನು ಪರಿಚಯಿಸಿತು.</p><p>* 1991ರಲ್ಲಿ POW ಕಾಯ್ದೆಯನ್ನು ಪರಿಚಯಿಸಿತು.</p><p>* 1995ರಲ್ಲಿ ವಕ್ಫ್ ಕಾಯ್ದೆಯನ್ನು ಪರಿಚಯಿಸಿತು.</p><p>* 2007ರಲ್ಲಿ ರಾಮ ಸೇತು ಟ್ರಸ್ಟ್ ಅನ್ನು ಪ್ರಾರಂಭಿಸಿತು. </p>.<h2>ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ?</h2><p>* ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು. </p><p>* ಆರ್ಟಿಕಲ್ 28ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು. </p><p>* HRCE Act 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡರು.</p><p>* ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು; ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ. ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚಾಯಿತು. </p><p>* 1951ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಪರಿಚಯಿಸುವ ಮೂಲಕ ಮುಸ್ಲಿಂ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು.</p><p>* 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು. ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ಕಳುಹಿಸಿದ್ದು ಇದೆ ಕಾಂಗ್ರೆಸ್ ಪಕ್ಷ. </p><p>* ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40,000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು. </p><p>* ವಕ್ಫ್ ಕಾಯಿದೆ ಮೂಲಕ ಮುಸ್ಲಿಮರು ಯಾವುದೇ ಭೂಮಿಯನ್ನು ತೆಗೆದುಕೊಳ್ಳುವ ಹಕ್ಕನ್ನು ಪಡೆದರು. </p><p>* 2009ರಲ್ಲಿ ಕೇಸರಿ ಭಯೋತ್ಪಾದನೆ (Saffron Terrorism) ಎಂಬ ಪದಪುಂಜವನ್ನು ಪರಿಚಯಿಸಿದರು.</p><p>* ಮಸೀದಿಗಳು ಮತ್ತು ಚರ್ಚ್ಗಳಿಗೆ ಸರ್ಕಾರದ ನಿಯಂತ್ರಣವಿಲ್ಲ, ಆದರೆ ಹಿಂದೂ ದೇವಾಲಯಗಳಿಗೆ ಇದೆ. </p><p>* ಸರ್ಕಾರಿ ಅನುದಾನಿತ ಮದರಸ ಇದೆ. ಆದರೆ, ಸರ್ಕಾರಿ ಅನುದಾನಿತ ಗುರುಕುಲಗಳಿಲ್ಲ.</p><p>* ವಕ್ಫ್ ಆಕ್ಟ್ ಇದೆ. ಆದರೆ, ಹಿಂದೂ ಭೂಮಿ ಕಾಯ್ದೆಯಿಲ್ಲ</p><p>ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಸಮಯ ಬಂದಿದೆ. ಈ ಚುನಾವಣೆ ಸನಾತನ ಧರ್ಮಕ್ಕೆ ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶವಾಗಿದೆ. ಸನಾತನ ಧರ್ಮ ಉಳಿಯಬೇಕಾದರೆ, ಹಿಂದೂಗಳಿಗೆ ಸಮಾನ ಹಕ್ಕು ಸಿಗಬೇಕಾದರೆ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಎಂದು ಬರೆದುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>