<p><strong>ಹೈದರಾಬಾದ್</strong>: ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಿಸಲಾಗಿದೆ.</p><p>ಶುಕ್ರವಾರ ಚಿರಂಜೀವಿ ಅವರು 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಇನ್ನೂ ಹೆಸರಿಡದ ನಟನ 158ನೇ ಸಿನಿಮಾವನ್ನು ಚಿತ್ರತಂಡ ಘೋಷಿಸಿದೆ.</p><p>ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ಕೆ.ಎಸ್.ರವೀಂದ್ರ, 'ಒಬ್ಬರೇ ಮೆಗಾಸ್ಟಾರ್, ಅವರೊಂದಿಗೆ ಎರಡನೇ ಸಿನಿಮಾ ಇದಾಗಿದೆ' ಎಂದು ಬರೆದುಕೊಂಡಿದ್ದಾರೆ </p><p>'ವಾಲ್ತೇರು ವೀರಯ್ಯ' ಚಿತ್ರದ ಬಳಿಕ ಇದೀಗ ನಟ ಚಿರಂಜೀವಿ ಹಾಗೂ ನಿರ್ದೇಶಕ ಕೆ.ಎಸ್.ರವೀಂದ್ರ ಅವರು ಎರಡನೇ ಬಾರಿಗೆ ಜತೆಯಾಗಿದ್ದಾರೆ. </p>. <p>ಚಿರಂಜೀವಿ ಅವರ 157ನೇ ಸಿನಿಮಾದ ಹೆಸರನ್ನು ಶುಕ್ರವಾರ ಅನಾವರಣ ಮಾಡಲಾಗಿದೆ. ಈ ಸಂಬಂಧ ನಿರ್ದೇಶಕ ಅನಿಲ್ ರವಿಪುಡಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮನ ಶಂಕರ ವರ ಪ್ರಸಾದ್ ಗಾರು‘ ಎಂದು ಹೆಸರಿಡಲಾಗಿದೆ. ಈ ಚಿತ್ರ 2026ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ. </p><p>‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. </p><p>ಹುಟ್ಟುಹಬ್ಬದ ದಿನದಂದು ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಎಕ್ಸ್ನಲ್ಲಿ ಚಿರಂಜೀವಿ ತಿಳಿಸಿದ್ದಾರೆ.</p>.ಸಂಪತ್ತಿನ ಮೌಲ್ಯ ₹936 ಕೋಟಿ: ಚಂದ್ರಬಾಬು ನಾಯ್ಡು ದೇಶದ ಶ್ರೀಮಂತ ಮುಖ್ಯಮಂತ್ರಿ.ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ.PHOTOS | ಸಿಂಪಲ್ ಲುಕ್ನಲ್ಲಿ ಗಮನ ಸೆಳೆದ ‘ಕರ್ಣ’ ಧಾರಾವಾಹಿ ನಟಿ ಭವ್ಯಾ ಗೌಡ.ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಹೇಶ್ ತಿಮರೋಡಿಗೆ ಜಾಮೀನು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಿಸಲಾಗಿದೆ.</p><p>ಶುಕ್ರವಾರ ಚಿರಂಜೀವಿ ಅವರು 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಇನ್ನೂ ಹೆಸರಿಡದ ನಟನ 158ನೇ ಸಿನಿಮಾವನ್ನು ಚಿತ್ರತಂಡ ಘೋಷಿಸಿದೆ.</p><p>ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ಕೆ.ಎಸ್.ರವೀಂದ್ರ, 'ಒಬ್ಬರೇ ಮೆಗಾಸ್ಟಾರ್, ಅವರೊಂದಿಗೆ ಎರಡನೇ ಸಿನಿಮಾ ಇದಾಗಿದೆ' ಎಂದು ಬರೆದುಕೊಂಡಿದ್ದಾರೆ </p><p>'ವಾಲ್ತೇರು ವೀರಯ್ಯ' ಚಿತ್ರದ ಬಳಿಕ ಇದೀಗ ನಟ ಚಿರಂಜೀವಿ ಹಾಗೂ ನಿರ್ದೇಶಕ ಕೆ.ಎಸ್.ರವೀಂದ್ರ ಅವರು ಎರಡನೇ ಬಾರಿಗೆ ಜತೆಯಾಗಿದ್ದಾರೆ. </p>. <p>ಚಿರಂಜೀವಿ ಅವರ 157ನೇ ಸಿನಿಮಾದ ಹೆಸರನ್ನು ಶುಕ್ರವಾರ ಅನಾವರಣ ಮಾಡಲಾಗಿದೆ. ಈ ಸಂಬಂಧ ನಿರ್ದೇಶಕ ಅನಿಲ್ ರವಿಪುಡಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮನ ಶಂಕರ ವರ ಪ್ರಸಾದ್ ಗಾರು‘ ಎಂದು ಹೆಸರಿಡಲಾಗಿದೆ. ಈ ಚಿತ್ರ 2026ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ. </p><p>‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. </p><p>ಹುಟ್ಟುಹಬ್ಬದ ದಿನದಂದು ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ‘ಮನ ಶಂಕರ ವರ ಪ್ರಸಾದ್ ಗಾರು‘ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಎಕ್ಸ್ನಲ್ಲಿ ಚಿರಂಜೀವಿ ತಿಳಿಸಿದ್ದಾರೆ.</p>.ಸಂಪತ್ತಿನ ಮೌಲ್ಯ ₹936 ಕೋಟಿ: ಚಂದ್ರಬಾಬು ನಾಯ್ಡು ದೇಶದ ಶ್ರೀಮಂತ ಮುಖ್ಯಮಂತ್ರಿ.ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ.PHOTOS | ಸಿಂಪಲ್ ಲುಕ್ನಲ್ಲಿ ಗಮನ ಸೆಳೆದ ‘ಕರ್ಣ’ ಧಾರಾವಾಹಿ ನಟಿ ಭವ್ಯಾ ಗೌಡ.ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಹೇಶ್ ತಿಮರೋಡಿಗೆ ಜಾಮೀನು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>