ಶನಿವಾರ, ಮಾರ್ಚ್ 25, 2023
30 °C

ಆ ಡಿವೋರ್ಸ್ ಎಕ್ಸ್‌ಪರ್ಟ್‌ನ್ನ ಭೇಟಿಯಾದ ಬಳಿಕ ನಾಗ ಚೈತನ್ಯ, ಸಮಂತಾ ಕೈಬಿಟ್ಟಿದ್ದು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು:  ತೆಲುಗು ನಟ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ದಾಂಪತ್ಯ ಜೀವನ ವಿವಾಹ ವಿಚ್ಚೇದನದಲ್ಲಿ ಅಂತ್ಯಗೊಂಡಿದ್ದು, ಈ ವಿಚಾರ ಟಾಲಿವುಡ್ ಸೇರಿದಂತೆ ಬಾಲಿವುಡ್‌ನಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ತಾರಾ ದಂಪತಿಯ ವಿಚ್ಚೇದನದ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಇನ್‌ಸ್ಟಾಂಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಕಂಗನಾ ರಣಾವತ್, ‘ನಾಗ ಚೈತನ್ಯ ಬಾಲಿವುಡ್‌ನ ಡಿವೋರ್ಸ್ ಎಕ್ಸಪರ್ಟ್‌ ಒಬ್ಬರನ್ನು ಭೇಟಿಯಾದ ಮೇಲೆಯೇ ಅವರು ಸಮಂತಾರನ್ನು ತೊರೆದಿದ್ದು‘ ಎಂದು ಪರೋಕ್ಷವಾಗಿ ನಟ ಅಮೀರ್ ಖಾನ್ ಮೇಲೆ ಹರಿಹಾಯ್ದಿದ್ದಾರೆ.

ಅಮೀರ್ ಖಾನ್ ನಟನೆಯ ಹಾಗೂ ನಿರ್ಮಾಣದ ಲಾಲ್‌ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ 2022ರಲ್ಲಿ ಬಿಡುಗಡೆಯಾಗಲಿದೆ.

2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.

‘ವಿಚ್ಚೇದನ ಕೊಟ್ಟಾಗ ಯಾವಾಗಲೂ ತಪ್ಪು ಗಂಡನದ್ದೇ ಆಗಿರುತ್ತದೆ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸಿ, ನಂತರ ನಾವು ಉತ್ತಮ ಸ್ನೇಹಿತರು ಎನ್ನುವವರ ಹಿಂದೆ ಹೋಗುವುದನ್ನು ನಿಲ್ಲಿಸಿ’ ಎಂದು ಅಮೀರ್ ಖಾನ್ ಅವರನ್ನು ಗುರಿಯಾಗಿಸಿ ಕಂಗನಾ ಹೇಳಿದ್ದಾರೆ.

ಲಾಲ್‌ ಸಿಂಗ್ ಚಡ್ಡಾದಲ್ಲಿ ನಾಗ ಚೈತನ್ಯ ಅಭಿನಯಿಸುವಾಗಲೇ ಅವರಿಬ್ಬರೂ ವಿಚ್ಚೇದನಕ್ಕೆ ಒಳಗಾಗಿದ್ದಾರೆ ಎಂದು ಕಂಗನಾ ಅಮೀರ್ ಖಾನ್‌ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ಅಮೀರ್ ಖಾನ್ ಅವರು 2002 ರಲ್ಲಿ ತಮ್ಮ ಮೊದಲ ಪತ್ನಿ ರೀನಾ ದತ್ತ ಅವರಿಗೆ ವಿಚ್ಚೇದನ ನೀಡಿದ್ದರು. ಕಳೆದ ಜೂನ್‌ನಲ್ಲಿ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ಅವರನ್ನು ಅಮೀರ್ ಖಾನ್ ತೊರೆದಿದ್ದಾರೆ.

ಇದನ್ನೂ ಓದಿ: ಕಡೆಗೂ ಬೇರೆ ಬೇರೆಯಾದ ನಾಗ ಚೈತನ್ಯ ಹಾಗೂ ಸಮಂತಾ: ಡಿವೋರ್ಸ್ ಘೋಷಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು