ಈ ಕುರಿತು ಮಾಹಿತಿ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ‘ಕೆಲ ದಿನಗಳಿಂದ ಅವರಿಗೆ ಸುಸ್ತು, ತಲೆಸುತ್ತು ಕಾಡುತ್ತಿದೆ ಎಂದು ಬುಧವಾರ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಇಸಿಜಿ ಮಾಡಿದ ವೇಳೆ ಹೃದಯದ ಬಡಿತ ಇಳಿಕೆಯಾಗಿರುವುದು ತಿಳಿಯಿತು. ಹೀಗಾಗಿ ಗುರುವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಿ ಪೇಸ್ಮೇಕರ್ ಅಳವಡಿಸಲಾಗಿದೆ. ಇದು ಹೃದಯಾಘಾತ ಅಲ್ಲ. ಮೂರು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ’ ಎಂದರು.