<p>ಕೊರೊನಾ ಸೋಂಕಿನ ಭೀತಿಯು ಯುಗಾದಿ ಹಬ್ಬಕ್ಕೂ ತಟ್ಟಿದೆ. ಕನ್ನಡ ಚಿತ್ರರಂಗದ ನಟ, ನಟಿಯರಿಗೆ ಈಗ ಬಿಡುವು ಸಿಕ್ಕಿದೆ. ಆದರೆ, ಯಾರೊಬ್ಬರ ಮನದಲ್ಲೂ ಹಬ್ಬದ ಸಂಭ್ರಮವಿಲ್ಲ. ಕೊರೊನೊ ಸೋಂಕು ಹರಡದಂತೆ ಎಚ್ಚರವಹಿಸಿ ಹಬ್ಬ ಆಚರಿಸಬೇಕು; ನಾವು ಕೂಡ ಮನೆಯಲ್ಲಿಯೂ ಉಳಿಯುತ್ತೇವೆ ಎನ್ನುವುದು ಅವರು ಅಭಿಮಾನಿಗಳಿಗೆ ನೀಡುವ ಸಲಹೆ.</p>.<p>ಹಬ್ಬದ ನೆಪದಲ್ಲಿ ಮನೆಯಿಂದ ಹೊರಗೆ ಬರಬಾರದು. ಗುಂಪುಗೂಡಬಾರದು. ಇದರಿಂದ ಅಪಾಯ ಹೆಚ್ಚು. ಹಬ್ಬದ ಸಂಭ್ರಮದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.</p>.<p>‘ನಗರದಿಂದ ಊರಿಗೆ ಹೋಗಬಾರದು ಎನ್ನುವ ಕಾರಣಕ್ಕೆಯೇ ನಾನು ಊರಿಗೆ ಹೋಗುವುದಿಲ್ಲ. ಬೆಂಗಳೂರಿಯಲ್ಲಿಯೇ ಇರುತ್ತೇನೆ. ಮನೆಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೆಂಗಳೂರಿನಲ್ಲಿ ವಾಸಿಸುವವರು ಹಳ್ಳಿಗಳಿಗೆ ಹೋಗಿ ಅಲ್ಲಿನವರಿಗೂ ಸೋಂಕು ಹಬ್ಬಿಸಬೇಡಿ’ ಎನ್ನುವುದು ‘ಡಾಲಿ’ ಖ್ಯಾತಿಯ ಧನಂಜಯ್ ಅವರ ಸಲಹೆ.</p>.<p>‘ಕೊರೊನಾ ಸೋಂಕು ಇದ್ದರೆ ಗೊತ್ತಾಗುವುದಿಲ್ಲ. ಹಳ್ಳಿಗಳಿಗೆ ಸೋಂಕು ತಲುಪಿಸಿದರೆ ಕಷ್ಟವಾಗಲಿದೆ. ವಾಸ್ತವಾಂಶವನ್ನು ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರಬೇಕು. ಸರ್ಕಾರದ ಕಾನೂನು ಪಾಲಿಸಬೇಕು. ವೈದ್ಯರು ಮತ್ತು ಸರ್ಕಾರದೊಟ್ಟಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬೇಡಿ’ ಎನ್ನುತ್ತಾರೆ ಅವರು.</p>.<p>ನಟ ಜಗ್ಗೇಶ್ ಕೂಡ ಮನೆಯಲ್ಲಿಯೇ ಉಳಿದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ‘ಸ್ವಲ್ಪ ಯಾಮಾರಿದರೆ ಕೊರೊನಾ ಸೋಂಕಿತರ ಸಂಖ್ಯೆ ಕೆಲವೇ ದಿನಗಳಲ್ಲಿ ಲಕ್ಷ ದಾಟಿ ಬಿಡುತ್ತದೆ. ಆಮೇಲೆ ಯಾವ ಸರ್ಕಾರ, ವೈದ್ಯರು, ಹಣ ನಮ್ಮ, ನಿಮ್ಮನ್ನು<br />ಕಾಪಾಡಲಾರದು. ದಯಮಾಡಿ ಸರ್ವರ ಒಳಿತಿಗಾಗಿ ನಿಮಗೆಷ್ಟೇ ಕಷ್ಟವಾದರು ಸಹಿಸಿಕೊಳ್ಳಿ. ಮನೆಯಲ್ಲೇ ಉಳಿದು ಸರ್ಕಾರದ ಆಜ್ಞೆ ಪಾಲಿಸಿ’ ಎಂದಿದ್ದಾರೆ.</p>.<p>ನಟ ದರ್ಶನ್ ಕೂಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ‘ಮಾರಕ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಬೇಕು. ಇದರ ಬಗ್ಗೆ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸರು ಶ್ರಮಿಸುತ್ತಿದ್ದಾರೆ. ಸೋಂಕಿನ ಬಗ್ಗೆ ತಿಳಿದರೂ ಹಬ್ಬಗಳಿಗಾಗಿ ಊರಿಗೆ ಹೋಗುವುದು ತಪ್ಪು. ಹಬ್ಬಕ್ಕಾಗಿ ವಾಹನಗಳಲ್ಲಿ ಸಂಚರಿಸಬೇಡಿ’ ಎಂದು ಸಲಹೆ ನೀಡಿದ್ದಾರೆ.</p>.<p>‘ಇಟಲಿ, ಸ್ಪೇನ್ನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಿಲ್ಲ. ಹಾಗಾಗಿ, ಅಲ್ಲಿನ ಅನಾಹುತಗಳು ನಮ್ಮ ಕಣ್ಣ ಮುಂದಿವೆ. ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನೂ ಪಾಲಿಸಬೇಕು’ ಎಂದಿದ್ದಾರೆ ದರ್ಶನ್.</p>.<p>ನಟಿ ರಚಿತಾ ರಾಮ್ ಯುಗಾದಿ ಹಬ್ಬದ ಸಂಭ್ರಮದ ನಡುವೆ ಮಾಡಿರುವ ಟ್ವೀಟ್ ಕುತೂಹಲಕಾರಿಯಾಗಿದೆ. ‘ಆರೋಗ್ಯವೇ ಭಾಗ್ಯ; ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕಿನ ಭೀತಿಯು ಯುಗಾದಿ ಹಬ್ಬಕ್ಕೂ ತಟ್ಟಿದೆ. ಕನ್ನಡ ಚಿತ್ರರಂಗದ ನಟ, ನಟಿಯರಿಗೆ ಈಗ ಬಿಡುವು ಸಿಕ್ಕಿದೆ. ಆದರೆ, ಯಾರೊಬ್ಬರ ಮನದಲ್ಲೂ ಹಬ್ಬದ ಸಂಭ್ರಮವಿಲ್ಲ. ಕೊರೊನೊ ಸೋಂಕು ಹರಡದಂತೆ ಎಚ್ಚರವಹಿಸಿ ಹಬ್ಬ ಆಚರಿಸಬೇಕು; ನಾವು ಕೂಡ ಮನೆಯಲ್ಲಿಯೂ ಉಳಿಯುತ್ತೇವೆ ಎನ್ನುವುದು ಅವರು ಅಭಿಮಾನಿಗಳಿಗೆ ನೀಡುವ ಸಲಹೆ.</p>.<p>ಹಬ್ಬದ ನೆಪದಲ್ಲಿ ಮನೆಯಿಂದ ಹೊರಗೆ ಬರಬಾರದು. ಗುಂಪುಗೂಡಬಾರದು. ಇದರಿಂದ ಅಪಾಯ ಹೆಚ್ಚು. ಹಬ್ಬದ ಸಂಭ್ರಮದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.</p>.<p>‘ನಗರದಿಂದ ಊರಿಗೆ ಹೋಗಬಾರದು ಎನ್ನುವ ಕಾರಣಕ್ಕೆಯೇ ನಾನು ಊರಿಗೆ ಹೋಗುವುದಿಲ್ಲ. ಬೆಂಗಳೂರಿಯಲ್ಲಿಯೇ ಇರುತ್ತೇನೆ. ಮನೆಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೆಂಗಳೂರಿನಲ್ಲಿ ವಾಸಿಸುವವರು ಹಳ್ಳಿಗಳಿಗೆ ಹೋಗಿ ಅಲ್ಲಿನವರಿಗೂ ಸೋಂಕು ಹಬ್ಬಿಸಬೇಡಿ’ ಎನ್ನುವುದು ‘ಡಾಲಿ’ ಖ್ಯಾತಿಯ ಧನಂಜಯ್ ಅವರ ಸಲಹೆ.</p>.<p>‘ಕೊರೊನಾ ಸೋಂಕು ಇದ್ದರೆ ಗೊತ್ತಾಗುವುದಿಲ್ಲ. ಹಳ್ಳಿಗಳಿಗೆ ಸೋಂಕು ತಲುಪಿಸಿದರೆ ಕಷ್ಟವಾಗಲಿದೆ. ವಾಸ್ತವಾಂಶವನ್ನು ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರಬೇಕು. ಸರ್ಕಾರದ ಕಾನೂನು ಪಾಲಿಸಬೇಕು. ವೈದ್ಯರು ಮತ್ತು ಸರ್ಕಾರದೊಟ್ಟಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬೇಡಿ’ ಎನ್ನುತ್ತಾರೆ ಅವರು.</p>.<p>ನಟ ಜಗ್ಗೇಶ್ ಕೂಡ ಮನೆಯಲ್ಲಿಯೇ ಉಳಿದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ‘ಸ್ವಲ್ಪ ಯಾಮಾರಿದರೆ ಕೊರೊನಾ ಸೋಂಕಿತರ ಸಂಖ್ಯೆ ಕೆಲವೇ ದಿನಗಳಲ್ಲಿ ಲಕ್ಷ ದಾಟಿ ಬಿಡುತ್ತದೆ. ಆಮೇಲೆ ಯಾವ ಸರ್ಕಾರ, ವೈದ್ಯರು, ಹಣ ನಮ್ಮ, ನಿಮ್ಮನ್ನು<br />ಕಾಪಾಡಲಾರದು. ದಯಮಾಡಿ ಸರ್ವರ ಒಳಿತಿಗಾಗಿ ನಿಮಗೆಷ್ಟೇ ಕಷ್ಟವಾದರು ಸಹಿಸಿಕೊಳ್ಳಿ. ಮನೆಯಲ್ಲೇ ಉಳಿದು ಸರ್ಕಾರದ ಆಜ್ಞೆ ಪಾಲಿಸಿ’ ಎಂದಿದ್ದಾರೆ.</p>.<p>ನಟ ದರ್ಶನ್ ಕೂಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ‘ಮಾರಕ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಬೇಕು. ಇದರ ಬಗ್ಗೆ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸರು ಶ್ರಮಿಸುತ್ತಿದ್ದಾರೆ. ಸೋಂಕಿನ ಬಗ್ಗೆ ತಿಳಿದರೂ ಹಬ್ಬಗಳಿಗಾಗಿ ಊರಿಗೆ ಹೋಗುವುದು ತಪ್ಪು. ಹಬ್ಬಕ್ಕಾಗಿ ವಾಹನಗಳಲ್ಲಿ ಸಂಚರಿಸಬೇಡಿ’ ಎಂದು ಸಲಹೆ ನೀಡಿದ್ದಾರೆ.</p>.<p>‘ಇಟಲಿ, ಸ್ಪೇನ್ನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಿಲ್ಲ. ಹಾಗಾಗಿ, ಅಲ್ಲಿನ ಅನಾಹುತಗಳು ನಮ್ಮ ಕಣ್ಣ ಮುಂದಿವೆ. ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನೂ ಪಾಲಿಸಬೇಕು’ ಎಂದಿದ್ದಾರೆ ದರ್ಶನ್.</p>.<p>ನಟಿ ರಚಿತಾ ರಾಮ್ ಯುಗಾದಿ ಹಬ್ಬದ ಸಂಭ್ರಮದ ನಡುವೆ ಮಾಡಿರುವ ಟ್ವೀಟ್ ಕುತೂಹಲಕಾರಿಯಾಗಿದೆ. ‘ಆರೋಗ್ಯವೇ ಭಾಗ್ಯ; ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>