ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ ಕೋಮು ದಳ್ಳುರಿಯಿಂದ ನಲುಗುತ್ತಿದೆ. ಒಂದು ಹತ್ಯೆಗೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ಎಂಬಂತೆ ಧರ್ಮಾಧಾರಿತವಾಗಿ ಸರಣಿ ಕೊಲೆಗಳು ನಡೆಯುತ್ತಿವೆ. ಮೂರು ದಶಕಗಳಿಂದೀಚೆಗೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಲೇ ಇವೆ. ಬಲಿಯಾದವರಲ್ಲಿ ಅಮಾಯಕರೂ ಇದ್ದಾರೆ. ಈ ಹಿಂದೆ ನಡೆದ ಕೋಮು ಗಲಭೆಗಳಲ್ಲಿ ಮುಗ್ಧ ಜನರು ಪ್ರಾಣಕಳೆದುಕೊಂಡಿದ್ದಾರೆ. ಧರ್ಮದ ಆಧಾರದ ಕೃತ್ಯಗಳು ಸಂಘಟಿತವಾಗಿ ನಡೆಯುತ್ತಿದ್ದು, ಈಗ ಅದರೊಳಗೆ ರಾಜಕೀಯವೂ ಬೆರೆತು ಹೋಗಿದೆ. ಸರಣಿ ಕೊಲೆಗಳು ದಕ್ಷಿಣ ಕನ್ನಡದಲ್ಲಿ ಕೋಮು ಸಾಮರಸ್ಯವನ್ನು ಕದಡುವಂತೆ ಮಾಡಿವೆ. ಜಿಲ್ಲೆಯಾದ್ಯಂತ ಕೋಮುದ್ವೇಷಮಯ ವಾತಾವರಣ ಇರುವುದರಿಂದ ಸಾರ್ವಜನಿಕರು ಭಯದಿಂದಲೇ ಓಡಾಡುವ, ಬದುಕುವ ಪರಿಸ್ಥಿತಿ ಬಂದೊದಗಿದೆ
ಮೂರು ದಶಕಗಳಲ್ಲಿ ನಡೆದ ಧರ್ಮಾಧಾರಿತ ಪ್ರಮುಖ ಹತ್ಯೆ ಪ್ರಕರಣಗಳು