<p><strong>ಬೆಂಗಳೂರು:</strong> ದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ (ಫೆ 15) ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದ ಯಾತ್ರಿಕರು ಮೃತಪಟ್ಟಿದ್ದಾರೆ. </p><p>ಇದರೊಂದಿಗೆ ಇಡೀ ದೇಶವೇ ಮಗದೊಂದು ಕಾಲ್ತುಳಿತ ದುರ್ಘಟನೆಗೆ ಸಾಕ್ಷಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ. ಈ ಪೈಕಿ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ದುರ್ಘಟನೆಗಳು ಸಂಭವಿಸಿವೆ. </p><p><strong>2025 (ಜನವರಿ 29): 30 ಸಾವು</strong></p><p>ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 'ಮೌನಿ ಅಮಾವಾಸ್ಯೆ' ಅಂಗವಾಗಿ ಸಂಗಮದಲ್ಲಿ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು. </p>.Maha Kumbh Stampede | ಪುಣ್ಯಸ್ನಾನಕ್ಕೆ ನೂಕುನುಗ್ಗಲು: 30 ಸಾವು. <p><strong>2024 (ಜುಲೈ 2): 121 ಸಾವು</strong></p><p>ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಆಯೋಜನೆ ಆಗಿದ್ದ ಸತ್ಸಂಗ (ಪ್ರಾರ್ಥನಾ ಸಭೆ) ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಸೇರಿ 121 ಮಂದಿ ಪ್ರಾಣ ಕಳೆದುಕೊಂಡರು. </p>.ಸಂಪಾದಕೀಯ | ಹಾಥರಸ್ನಲ್ಲಿ ಕಾಲ್ತುಳಿತ ದುರಂತ; ಮತ್ತೆ ಮತ್ತೆ ಲೋಪ, ಕಲಿಯದ ಪಾಠ. <p><strong>2023 (ಮಾರ್ಚ್ 31): 36 ಸಾವು</strong></p><p>ಇಂದೋರ್ನ ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ದುರಂತದಲ್ಲಿ 36 ಮಂದಿ ಸಾವಿಗೀಡಾದರು. ರಾಮನವಮಿ ಆಚರಣೆ ವೇಳೆ ದೇವಸ್ಥಾನದಲ್ಲಿ ಜನದಟ್ಟಣೆ ಉಂಟಾಗಿತ್ತು. ಬಾವಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ಜಮಾಯಿಸಿತ್ತು. </p>.ಇಂದೋರ್| ದೇವಸ್ಥಾನದ ಮೆಟ್ಟಿಲುಬಾವಿ ದುರಂತ: 35ಕ್ಕೆ ಏರಿದ ಸಾವಿನ ಸಂಖ್ಯೆ. <p><strong>2022 (ಜನವರಿ 1): 12 ಸಾವು</strong></p><p>ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಹೊಸ ವರ್ಷದ ದಿನ ನಡೆದ ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಮೃತಪಟ್ಟರು. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದರು. </p>.ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: 12 ಮಂದಿ ಸಾವು. <p><strong>2017 (ಸೆಪ್ಟೆಂಬರ್ 29): 23 ಸಾವು</strong></p><p>ಮುಂಬೈಯ ಎಲ್ಫಿನ್ಸ್ಟನ್ ರೋಡ್ ಮತ್ತು ಪರೇಲ್ ರೈಲು ನಿಲ್ದಾಣಗಳ ಮಧ್ಯೆ ಸಂಪರ್ಕ ಕಲ್ಪಿಸುವ ಪಾದಚಾರಿ ಸೇತುವೆಯ ಮೇಲೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 23 ಮಂದಿ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದರು. </p>.ಮುಂಬೈ: ಕಾಲ್ತುಳಿತಕ್ಕೆ 23 ಬಲಿ. <p><strong>2015 (ಜುಲೈ 14): 27 ಸಾವು</strong></p><p>ಆಂಧ್ರಪ್ರದೇಶದ ರಾಜಮಂಡ್ರಿಯ ಗೋದಾವರಿ ನದಿ ತೀರದ ಪುಷ್ಕರ್ ಘಾಟ್ನಲ್ಲಿ 'ಪುಷ್ಕರಂ' ಉತ್ಸವದ (ದಕ್ಷಿಣ ಭಾರತದ ಕುಂಭಮೇಳ) ಅಂಗವಾಗ ಪುಣ್ಯ ಸ್ನಾನಕ್ಕಾಗಿ ಜನರು ಸಾಲಾಗಿ ನಿಂತಿದ್ದಾಗ ಉಂಟಾದ ನೂಕುನುಗ್ಗಲಿನಲ್ಲಿ 27 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 20 ಮಂದಿ ಗಾಯಗೊಂಡರು. </p>.ಆಂಧ್ರದಲ್ಲಿ ಕಾಲ್ತುಳಿತ: 27 ಸಾವು. <p><strong>2014 (ಅಕ್ಟೋಬರ್ 3): 32 ಸಾವು</strong></p><p>ಪಾಟ್ನ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಯ ಬೆನ್ನಲ್ಲೇ ನಡೆದ ಕಾಲ್ತುಳಿತದಲ್ಲಿ 32 ಮಂದಿ ಮೃತಪಟ್ಟು, 26 ಮಂದಿ ಗಾಯಗೊಂಡಿದ್ದರು. </p><p><strong>2013 (ಅಕ್ಟೋಬರ್ 13): 115 ಸಾವು</strong></p><p>ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್ಗಢದಲ್ಲಿ ನವರಾತ್ರಿ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೇತುವೆ ಕುಸಿಯುತ್ತಿದೆ ಎಂಬ ಗಾಳಿ ಸುದ್ದಿ ಹರಡಿರುವುದು ಅಪಘಾತಕ್ಕೆ ಕಾರಣವಾಗಿತ್ತು. </p>.ಮಸಣವಾದ ನವರಾತ್ರಿ ಉತ್ಸವ. <p><strong>2012 (ನವೆಂಬರ್ 19): 20 ಸಾವು</strong></p><p>ಪಾಟ್ನದ ಗಂಗಾ ನದಿಯ ತಟದಲ್ಲಿರುವ ಅದಾಲತ್ ಘಾಟ್ನಲ್ಲಿ ಛತ್ ಪೂಜೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ತಾತ್ಕಾಲಿಕ ಸೇತುವೆ ಕುಸಿದು 20 ಮಂದಿ ಮೃತಪಟ್ಟಿದ್ದರು. </p><p><strong>2011 (ನವೆಂಬರ್ 8): 20 ಸಾವು</strong></p><p>ಹರಿದ್ವಾರದ ಗಂಗಾ ನದಿಯ ತಟದಲ್ಲಿರುವ ಹರ್ ಕೀ ಪೌರಿ ಫಾಟ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 20 ಮಂದಿ ಮೃತಪಟ್ಟಿದ್ದರು. </p>.ಹರಿದ್ವಾರ: ಕಾಲ್ತುಳಿತ, 16 ಜನರ ಸಾವು. <p><strong>2011 (ಜನವರಿ 14): 104 ಸಾವು</strong></p><p>ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 104 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. </p>.ಶಬರಿ ಮಲೆ ದುರಂತ: ಕಾಲ್ತುಳಿತಕ್ಕೆ 100 ಭಕ್ತರ ಸಾವು. <p><strong>2010 (ಮಾರ್ಚ್ 4): 63 ಸಾವು</strong></p><p>ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಕೃಪಾಲು ಮಹಾರಾಜರ ರಾಮ ಜಾನಕಿ ದೇಗುಲದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 63 ಮಂದಿ ಮೃತಪಟ್ಟಿದ್ದರು. ಸ್ವಯಂಘೋಷಿತ ದೇವಮಾನವನಿಂದ ಉಚಿತವಾಗಿ ಬಟ್ಟೆ ಆಹಾರ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಅವಘಡ ಸಂಭವಿಸಿತ್ತು. </p><p><strong>2008 (ಸೆಪ್ಟೆಂಬರ್ 2008): 250 ಸಾವು</strong></p><p>ರಾಜಸ್ಥಾನದ ಜೋಧ್ಪುರ ನಗರದ ಚಾಮುಂಡಾ ದೇವಿ ದೇಗುಲದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಉಂಟಾದ ಕಾಲ್ತುಳಿತದಲ್ಲಿ ಸುಮಾರು 250 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. </p><p><strong>2008 (ಆಗಸ್ಟ್ 3): 162 ಸಾವು</strong></p><p>ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಬಂಡೆಗಳ ಕುಸಿತದ ವದಂತಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 162 ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿದ್ದರು. </p><p><strong>2005 (ಜನವರಿ 25): 340ಕ್ಕೂ ಹೆಚ್ಚು ಸಾವು</strong></p><p>ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಂಧಾರದೇವಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 340ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿದ್ದರು. </p><p><strong>2003 (ಆಗಸ್ಟ್ 27): 39 ಸಾವು</strong></p><p>ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಮೃತಪಟ್ಟು, 140 ಮಂದಿ ಗಾಯಗೊಂಡಿದ್ದರು. </p>.Kumbh Stampede | ಜೆಸಿಬಿ ಮೂಲಕ ಮೃತದೇಹಗಳ ಸಾಗಾಟ: ವಿಪಕ್ಷಗಳ ಆರೋಪ.Maha Kumbh Stampede | ಕಾಣೆಯಾದವರಿಗೆ ಇನ್ನೂ ಹುಡುಕಾಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ (ಫೆ 15) ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದ ಯಾತ್ರಿಕರು ಮೃತಪಟ್ಟಿದ್ದಾರೆ. </p><p>ಇದರೊಂದಿಗೆ ಇಡೀ ದೇಶವೇ ಮಗದೊಂದು ಕಾಲ್ತುಳಿತ ದುರ್ಘಟನೆಗೆ ಸಾಕ್ಷಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ. ಈ ಪೈಕಿ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ದುರ್ಘಟನೆಗಳು ಸಂಭವಿಸಿವೆ. </p><p><strong>2025 (ಜನವರಿ 29): 30 ಸಾವು</strong></p><p>ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 'ಮೌನಿ ಅಮಾವಾಸ್ಯೆ' ಅಂಗವಾಗಿ ಸಂಗಮದಲ್ಲಿ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು. </p>.Maha Kumbh Stampede | ಪುಣ್ಯಸ್ನಾನಕ್ಕೆ ನೂಕುನುಗ್ಗಲು: 30 ಸಾವು. <p><strong>2024 (ಜುಲೈ 2): 121 ಸಾವು</strong></p><p>ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಆಯೋಜನೆ ಆಗಿದ್ದ ಸತ್ಸಂಗ (ಪ್ರಾರ್ಥನಾ ಸಭೆ) ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಸೇರಿ 121 ಮಂದಿ ಪ್ರಾಣ ಕಳೆದುಕೊಂಡರು. </p>.ಸಂಪಾದಕೀಯ | ಹಾಥರಸ್ನಲ್ಲಿ ಕಾಲ್ತುಳಿತ ದುರಂತ; ಮತ್ತೆ ಮತ್ತೆ ಲೋಪ, ಕಲಿಯದ ಪಾಠ. <p><strong>2023 (ಮಾರ್ಚ್ 31): 36 ಸಾವು</strong></p><p>ಇಂದೋರ್ನ ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ದುರಂತದಲ್ಲಿ 36 ಮಂದಿ ಸಾವಿಗೀಡಾದರು. ರಾಮನವಮಿ ಆಚರಣೆ ವೇಳೆ ದೇವಸ್ಥಾನದಲ್ಲಿ ಜನದಟ್ಟಣೆ ಉಂಟಾಗಿತ್ತು. ಬಾವಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ಜಮಾಯಿಸಿತ್ತು. </p>.ಇಂದೋರ್| ದೇವಸ್ಥಾನದ ಮೆಟ್ಟಿಲುಬಾವಿ ದುರಂತ: 35ಕ್ಕೆ ಏರಿದ ಸಾವಿನ ಸಂಖ್ಯೆ. <p><strong>2022 (ಜನವರಿ 1): 12 ಸಾವು</strong></p><p>ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಹೊಸ ವರ್ಷದ ದಿನ ನಡೆದ ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಮೃತಪಟ್ಟರು. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದರು. </p>.ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: 12 ಮಂದಿ ಸಾವು. <p><strong>2017 (ಸೆಪ್ಟೆಂಬರ್ 29): 23 ಸಾವು</strong></p><p>ಮುಂಬೈಯ ಎಲ್ಫಿನ್ಸ್ಟನ್ ರೋಡ್ ಮತ್ತು ಪರೇಲ್ ರೈಲು ನಿಲ್ದಾಣಗಳ ಮಧ್ಯೆ ಸಂಪರ್ಕ ಕಲ್ಪಿಸುವ ಪಾದಚಾರಿ ಸೇತುವೆಯ ಮೇಲೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 23 ಮಂದಿ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದರು. </p>.ಮುಂಬೈ: ಕಾಲ್ತುಳಿತಕ್ಕೆ 23 ಬಲಿ. <p><strong>2015 (ಜುಲೈ 14): 27 ಸಾವು</strong></p><p>ಆಂಧ್ರಪ್ರದೇಶದ ರಾಜಮಂಡ್ರಿಯ ಗೋದಾವರಿ ನದಿ ತೀರದ ಪುಷ್ಕರ್ ಘಾಟ್ನಲ್ಲಿ 'ಪುಷ್ಕರಂ' ಉತ್ಸವದ (ದಕ್ಷಿಣ ಭಾರತದ ಕುಂಭಮೇಳ) ಅಂಗವಾಗ ಪುಣ್ಯ ಸ್ನಾನಕ್ಕಾಗಿ ಜನರು ಸಾಲಾಗಿ ನಿಂತಿದ್ದಾಗ ಉಂಟಾದ ನೂಕುನುಗ್ಗಲಿನಲ್ಲಿ 27 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 20 ಮಂದಿ ಗಾಯಗೊಂಡರು. </p>.ಆಂಧ್ರದಲ್ಲಿ ಕಾಲ್ತುಳಿತ: 27 ಸಾವು. <p><strong>2014 (ಅಕ್ಟೋಬರ್ 3): 32 ಸಾವು</strong></p><p>ಪಾಟ್ನ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಯ ಬೆನ್ನಲ್ಲೇ ನಡೆದ ಕಾಲ್ತುಳಿತದಲ್ಲಿ 32 ಮಂದಿ ಮೃತಪಟ್ಟು, 26 ಮಂದಿ ಗಾಯಗೊಂಡಿದ್ದರು. </p><p><strong>2013 (ಅಕ್ಟೋಬರ್ 13): 115 ಸಾವು</strong></p><p>ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್ಗಢದಲ್ಲಿ ನವರಾತ್ರಿ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೇತುವೆ ಕುಸಿಯುತ್ತಿದೆ ಎಂಬ ಗಾಳಿ ಸುದ್ದಿ ಹರಡಿರುವುದು ಅಪಘಾತಕ್ಕೆ ಕಾರಣವಾಗಿತ್ತು. </p>.ಮಸಣವಾದ ನವರಾತ್ರಿ ಉತ್ಸವ. <p><strong>2012 (ನವೆಂಬರ್ 19): 20 ಸಾವು</strong></p><p>ಪಾಟ್ನದ ಗಂಗಾ ನದಿಯ ತಟದಲ್ಲಿರುವ ಅದಾಲತ್ ಘಾಟ್ನಲ್ಲಿ ಛತ್ ಪೂಜೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ತಾತ್ಕಾಲಿಕ ಸೇತುವೆ ಕುಸಿದು 20 ಮಂದಿ ಮೃತಪಟ್ಟಿದ್ದರು. </p><p><strong>2011 (ನವೆಂಬರ್ 8): 20 ಸಾವು</strong></p><p>ಹರಿದ್ವಾರದ ಗಂಗಾ ನದಿಯ ತಟದಲ್ಲಿರುವ ಹರ್ ಕೀ ಪೌರಿ ಫಾಟ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 20 ಮಂದಿ ಮೃತಪಟ್ಟಿದ್ದರು. </p>.ಹರಿದ್ವಾರ: ಕಾಲ್ತುಳಿತ, 16 ಜನರ ಸಾವು. <p><strong>2011 (ಜನವರಿ 14): 104 ಸಾವು</strong></p><p>ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 104 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. </p>.ಶಬರಿ ಮಲೆ ದುರಂತ: ಕಾಲ್ತುಳಿತಕ್ಕೆ 100 ಭಕ್ತರ ಸಾವು. <p><strong>2010 (ಮಾರ್ಚ್ 4): 63 ಸಾವು</strong></p><p>ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಕೃಪಾಲು ಮಹಾರಾಜರ ರಾಮ ಜಾನಕಿ ದೇಗುಲದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 63 ಮಂದಿ ಮೃತಪಟ್ಟಿದ್ದರು. ಸ್ವಯಂಘೋಷಿತ ದೇವಮಾನವನಿಂದ ಉಚಿತವಾಗಿ ಬಟ್ಟೆ ಆಹಾರ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಅವಘಡ ಸಂಭವಿಸಿತ್ತು. </p><p><strong>2008 (ಸೆಪ್ಟೆಂಬರ್ 2008): 250 ಸಾವು</strong></p><p>ರಾಜಸ್ಥಾನದ ಜೋಧ್ಪುರ ನಗರದ ಚಾಮುಂಡಾ ದೇವಿ ದೇಗುಲದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಉಂಟಾದ ಕಾಲ್ತುಳಿತದಲ್ಲಿ ಸುಮಾರು 250 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. </p><p><strong>2008 (ಆಗಸ್ಟ್ 3): 162 ಸಾವು</strong></p><p>ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಬಂಡೆಗಳ ಕುಸಿತದ ವದಂತಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 162 ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿದ್ದರು. </p><p><strong>2005 (ಜನವರಿ 25): 340ಕ್ಕೂ ಹೆಚ್ಚು ಸಾವು</strong></p><p>ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಂಧಾರದೇವಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 340ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿದ್ದರು. </p><p><strong>2003 (ಆಗಸ್ಟ್ 27): 39 ಸಾವು</strong></p><p>ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಮೃತಪಟ್ಟು, 140 ಮಂದಿ ಗಾಯಗೊಂಡಿದ್ದರು. </p>.Kumbh Stampede | ಜೆಸಿಬಿ ಮೂಲಕ ಮೃತದೇಹಗಳ ಸಾಗಾಟ: ವಿಪಕ್ಷಗಳ ಆರೋಪ.Maha Kumbh Stampede | ಕಾಣೆಯಾದವರಿಗೆ ಇನ್ನೂ ಹುಡುಕಾಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>