<p>ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ಯೋಗರಾಜ್ ಭಟ್ ಮಾತನಾಡಿ, ಅಪ್ಪು ಅವರ ಸರಳತೆ, ಮುಗ್ದತೆ ಬಗ್ಗೆ ಕೊಂಡಾಡಿದ್ದಾರೆ. </p><p>‘ನನಗೆ ಪುನೀತ್ ರಾಜ್ಕುಮಾರ್ ಅವರು ನೆನಪಾಗದೇ ಇರೋ ದಿನವೇ ಇಲ್ಲ. ಜೊತೆಗಿರದ ಜೀವ ಎಂದಿಗೂ ಜೀವಂತ . ನಾನು ಅವರಿಗಾಗಿ ‘ಲಗೋರಿ’ ಎಂಬ ಸಿನಿಮಾದ ಕಥೆಯನ್ನು ಬರೆದಿದ್ದೆ' ಎಂದು ಯೋಗರಾಜ್ ಹೇಳಿಕೊಂಡಿದ್ದಾರೆ.</p>.Photos| ರಿಷಬ್ ನಿರ್ದೇಶನದ 'ಸ.ಹಿ.ಪ್ರಾ.ಶಾಲೆ' ಗೆ ರಾಜ್ಯ ಚಲನಚಿತ್ರ ಪ್ರಶಸ್ತಿ.<p>‘ಹೀಗೆ ಒಂದು ದಿನ ನಡು ರಾತ್ರಿಯಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. ಆ ದಿನ ಸದಾಶಿವನಗರ ಸುತ್ತಮುತ್ತ ಕರೆಂಟ್ ಇರ್ಲಿಲ್ಲ. ದಾರಿ ಬದಿ ಫೋನ್ನಲ್ಲಿ ಮಾತನಾಡುತ್ತಿದ್ದ ಅಪರಿಚಿತರ ಒಬ್ಬರ ಬಳಿ ಮನೋಮೂರ್ತಿ ಅವರ ಮನೆ ವಿಳಾಸ ಕೇಳಿದ್ದೆ. ಆ ಸಮಯದಲ್ಲಿ ಅಪ್ಪು ಅವರಿಗೆ ನನ್ನ ಪರಿಚಯ ಇರಲಿಲ್ಲ. ಆದರೂ ನಾನು ಕೇಳಿದ ವಿಳಾಸವನ್ನು ನಡು ರಾತ್ರಿಯಲ್ಲಿ ತೋರಿಸಿದ್ದರು’ ಎಂದು ಯೋಗರಾಜ್ ಅವರು ಪುನೀತ್ ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ. </p><p>‘ಕೆಲವು ಸಾವುಗಳು.. ಸಾವು ಎನ್ನಲಾಗುವುದಿಲ್ಲ.. ಇದು ಸಾವಲ್ಲ.. ಅವರ ಹುಟ್ಟು ಅನ್ನಬಹುದಲ್ಲ.. </p><p>ಹೆಚ್ಚಿಗೆ ಹೇಳುವುದು ಏನಿಲ್ಲ.. ವಿಷಯ ಇಷ್ಟೆ. ಅಪ್ಪು ಎಲ್ಲಿಗೂ ಹೋಗಿಲ್ಲ.. ಆತ ಎಲ್ಲಿಗೂ ಹೋಗಲ್ಲ..</p><p>ಅಪ್ಪು ಅಜರಾಮರ..ಅವಿಸ್ಮರಣೀಯ..ಪರಮ ಪುನೀತ ಎಂದರೆ ತಪ್ಪೇನಿಲ್ಲ’ ಎಂದು ಯೋಗರಾಜ್ ಭಟ್ ಅವರು ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ಸಾಲುಗಳನ್ನು ಬರೆದು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ಯೋಗರಾಜ್ ಭಟ್ ಮಾತನಾಡಿ, ಅಪ್ಪು ಅವರ ಸರಳತೆ, ಮುಗ್ದತೆ ಬಗ್ಗೆ ಕೊಂಡಾಡಿದ್ದಾರೆ. </p><p>‘ನನಗೆ ಪುನೀತ್ ರಾಜ್ಕುಮಾರ್ ಅವರು ನೆನಪಾಗದೇ ಇರೋ ದಿನವೇ ಇಲ್ಲ. ಜೊತೆಗಿರದ ಜೀವ ಎಂದಿಗೂ ಜೀವಂತ . ನಾನು ಅವರಿಗಾಗಿ ‘ಲಗೋರಿ’ ಎಂಬ ಸಿನಿಮಾದ ಕಥೆಯನ್ನು ಬರೆದಿದ್ದೆ' ಎಂದು ಯೋಗರಾಜ್ ಹೇಳಿಕೊಂಡಿದ್ದಾರೆ.</p>.Photos| ರಿಷಬ್ ನಿರ್ದೇಶನದ 'ಸ.ಹಿ.ಪ್ರಾ.ಶಾಲೆ' ಗೆ ರಾಜ್ಯ ಚಲನಚಿತ್ರ ಪ್ರಶಸ್ತಿ.<p>‘ಹೀಗೆ ಒಂದು ದಿನ ನಡು ರಾತ್ರಿಯಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. ಆ ದಿನ ಸದಾಶಿವನಗರ ಸುತ್ತಮುತ್ತ ಕರೆಂಟ್ ಇರ್ಲಿಲ್ಲ. ದಾರಿ ಬದಿ ಫೋನ್ನಲ್ಲಿ ಮಾತನಾಡುತ್ತಿದ್ದ ಅಪರಿಚಿತರ ಒಬ್ಬರ ಬಳಿ ಮನೋಮೂರ್ತಿ ಅವರ ಮನೆ ವಿಳಾಸ ಕೇಳಿದ್ದೆ. ಆ ಸಮಯದಲ್ಲಿ ಅಪ್ಪು ಅವರಿಗೆ ನನ್ನ ಪರಿಚಯ ಇರಲಿಲ್ಲ. ಆದರೂ ನಾನು ಕೇಳಿದ ವಿಳಾಸವನ್ನು ನಡು ರಾತ್ರಿಯಲ್ಲಿ ತೋರಿಸಿದ್ದರು’ ಎಂದು ಯೋಗರಾಜ್ ಅವರು ಪುನೀತ್ ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ. </p><p>‘ಕೆಲವು ಸಾವುಗಳು.. ಸಾವು ಎನ್ನಲಾಗುವುದಿಲ್ಲ.. ಇದು ಸಾವಲ್ಲ.. ಅವರ ಹುಟ್ಟು ಅನ್ನಬಹುದಲ್ಲ.. </p><p>ಹೆಚ್ಚಿಗೆ ಹೇಳುವುದು ಏನಿಲ್ಲ.. ವಿಷಯ ಇಷ್ಟೆ. ಅಪ್ಪು ಎಲ್ಲಿಗೂ ಹೋಗಿಲ್ಲ.. ಆತ ಎಲ್ಲಿಗೂ ಹೋಗಲ್ಲ..</p><p>ಅಪ್ಪು ಅಜರಾಮರ..ಅವಿಸ್ಮರಣೀಯ..ಪರಮ ಪುನೀತ ಎಂದರೆ ತಪ್ಪೇನಿಲ್ಲ’ ಎಂದು ಯೋಗರಾಜ್ ಭಟ್ ಅವರು ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ಸಾಲುಗಳನ್ನು ಬರೆದು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>