<p>‘ಯಾವಾಗಲೂ ನಮ್ ನಿರ್ಮಲಕ್ಕಂಗೆ ಬೈತಿರತೀ. ಮಂದಿ ಬಗ್ಗೆ ಆಕಿ ಎಷ್ಟು ಕಾಳಜಿ ಮಾಡತಾಳ ಅಂತ ಈಗಾದ್ರೂ ತಿಳಕೋ…’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.Podcast ಚುರುಮುರಿ: ನೆಮ್ಮದಿಯ ಸುದ್ದಿ!.<p>‘ಹಂತಾಪರಿ ಕಲ್ಯಾಣ ಕಾರ್ಯಕ್ರಮ ಏನು ಮಾಡ್ಯಾಳಲೇ’ ಎಂದೆ ಅಚ್ಚರಿಯಿಂದ.</p>.<p>‘ಈ ಸಲ ಆದಾಯ ತೆರಿಗೆ ಮಿತಿಯನ್ನ ಹದಿನೈದು ಲಕ್ಷಕ್ಕೆ ಏರಿಸಬೌದು ಅಂತ ಸುದ್ದಿ ಐತಿ. ಮಧ್ಯಮ ವರ್ಗದವರಿಗೆ ಇನ್ನೇನು ಬೇಕು?’ ಬೆಕ್ಕಣ್ಣ ವಾದಿಸಿತು.</p>.<p>‘ಸುದ್ದಿ ಅಲ್ಲ, ಅದಿನ್ನೂ ಗಾಳಿಸುದ್ದಿ’ ಎಂದೆ.</p>.<p>‘ಒಲೆವಳಗೆ ಹೊಗೆಯಾಡಿತು ಅಂದ್ರ ಬೆಂಕಿ ಹತ್ತತೈತಿ. ಗಾಳಿಸುದ್ದಿನೇ ಆಮೇಲೆ ಖರೇಸುದ್ದಿ ಆಗೂದು’ ಬೆಕ್ಕಣ್ಣ ನಕ್ಕಿತು.</p>.<p>‘ಆದಾಯ ತೆರಿಗೆ ಮಿತಿ ಏರಿಸಿದರೆ, ಕಡಿಮೆ ತೆರಿಗೆ ಕೊಟ್ಟು, ಉಳಿಸಿದ ರೊಕ್ಕದಿಂದ ಮಂದಿ ಪಾಪ್ಕಾರ್ನ್ ತಿನ್ನತಾರೆ. ಆವಾಗ ಪಾಪ್ಕಾರ್ನ್ ಜಿಎಸ್ಟಿವಳಗೆ ಆ ರೊಕ್ಕ ವಸೂಲು ಮಾಡಬೌದಂತ ನಿರ್ಮಲಕ್ಕ ಪ್ಲಾನ್ ಮಾಡ್ಯಾರೆ’ ಎಂದೆ.</p>.<p>‘ಬಡವರು ತಿನ್ನೋ ಸಾದಾ ಪಾಪ್ಕಾರ್ನಿಗೆ 5% ಜಿಎಸ್ಟಿ, ಮಧ್ಯಮವರ್ಗದವರು ತಿನ್ನೋ ಉಪ್ಪು ಮಸಾಲೆ ಹಚ್ಚಿ ಪ್ಯಾಕ್ ಮಾಡಿದ್ದಕ್ಕೆ 12% ಜಿಎಸ್ಟಿ, ಮತ್ತೆ ರೊಕ್ಕ ಇದ್ದೋರು ತಿನ್ನೋ ಕ್ಯಾರಮಲ್ ಪಾಪ್ಕಾರ್ನಿಗೆ 18% ಜಿಎಸ್ಟಿ. ಅಂದ್ರ ಜೇಬಿಗೆ ತಕ್ಕ ಜಿಎಸ್ಟಿ’ ಎಂದು ಮರು ವಾದಿಸಿತು.</p>.<p>‘ಒಂದು ದೇಶ, ಎಲ್ಲಾ ಒಂದೇ ಇರಬಕು ಅನ್ನೋರು ತಿನ್ನುವ ಒಂದು ಐಟಮ್ಮಿಗೆ ಮೂರು ಥರದ ಜಿಎಸ್ಟಿ ಹಾಕೂದು ಯಾವ ನ್ಯಾಯ?’ ನಾನು ಪ್ರಶ್ನಿಸಿದೆ.</p>.<p>‘ವೈವಿಧ್ಯತೆಯ ದೇಶ ನಮ್ಮದು… ಹಂಗಾಗಿ ವೈವಿಧ್ಯತೆಯ ಜಿಎಸ್ಟಿ! ಆದ್ರೂ ವರ್ಷದ ಕೊನೆಗೆ ನಿರ್ಮಲಕ್ಕ ತೆರಿಗೆ ಮಿತಿ ಹೆಚ್ಚಳದ ನೆಮ್ಮದಿಯ ಸುದ್ದಿ ಕೊಟ್ಟಾಳೆ’ ಎಂದು ಮೀಸೆ ತಿರುವಿತು.</p>.<p>‘ಡಾಲರ್ ಎದ್ರು ನಮ್ಮ ರೂಪಾಯಿ ಕುಸಿದು ಪಾತಾಳ ಕಂಡೈತಿ. ಯಾವ ನೆಮ್ಮದಿಯ ಮಾತಾಡ್ತಿ?’</p>.<p>‘ನೀವು ಬಡವರು, ಮಧ್ಯಮವರ್ಗದವರು ಡಾಲರ್ ಕೊಳ್ಳಂಗಿಲ್ಲ! ನಿಮ್ಮ ವ್ಯಾಪಾರ ರೂಪಾಯಿವಳಗೆ ನಡೀತೈತೆ. ನಿಮಗ್ಯಾಕೆ ಚಿಂತೆ’ ಎಂದು ಬೆಕ್ಕಣ್ಣ ಹುಂಬವಾದ ಮುಂದಿಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಯಾವಾಗಲೂ ನಮ್ ನಿರ್ಮಲಕ್ಕಂಗೆ ಬೈತಿರತೀ. ಮಂದಿ ಬಗ್ಗೆ ಆಕಿ ಎಷ್ಟು ಕಾಳಜಿ ಮಾಡತಾಳ ಅಂತ ಈಗಾದ್ರೂ ತಿಳಕೋ…’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.Podcast ಚುರುಮುರಿ: ನೆಮ್ಮದಿಯ ಸುದ್ದಿ!.<p>‘ಹಂತಾಪರಿ ಕಲ್ಯಾಣ ಕಾರ್ಯಕ್ರಮ ಏನು ಮಾಡ್ಯಾಳಲೇ’ ಎಂದೆ ಅಚ್ಚರಿಯಿಂದ.</p>.<p>‘ಈ ಸಲ ಆದಾಯ ತೆರಿಗೆ ಮಿತಿಯನ್ನ ಹದಿನೈದು ಲಕ್ಷಕ್ಕೆ ಏರಿಸಬೌದು ಅಂತ ಸುದ್ದಿ ಐತಿ. ಮಧ್ಯಮ ವರ್ಗದವರಿಗೆ ಇನ್ನೇನು ಬೇಕು?’ ಬೆಕ್ಕಣ್ಣ ವಾದಿಸಿತು.</p>.<p>‘ಸುದ್ದಿ ಅಲ್ಲ, ಅದಿನ್ನೂ ಗಾಳಿಸುದ್ದಿ’ ಎಂದೆ.</p>.<p>‘ಒಲೆವಳಗೆ ಹೊಗೆಯಾಡಿತು ಅಂದ್ರ ಬೆಂಕಿ ಹತ್ತತೈತಿ. ಗಾಳಿಸುದ್ದಿನೇ ಆಮೇಲೆ ಖರೇಸುದ್ದಿ ಆಗೂದು’ ಬೆಕ್ಕಣ್ಣ ನಕ್ಕಿತು.</p>.<p>‘ಆದಾಯ ತೆರಿಗೆ ಮಿತಿ ಏರಿಸಿದರೆ, ಕಡಿಮೆ ತೆರಿಗೆ ಕೊಟ್ಟು, ಉಳಿಸಿದ ರೊಕ್ಕದಿಂದ ಮಂದಿ ಪಾಪ್ಕಾರ್ನ್ ತಿನ್ನತಾರೆ. ಆವಾಗ ಪಾಪ್ಕಾರ್ನ್ ಜಿಎಸ್ಟಿವಳಗೆ ಆ ರೊಕ್ಕ ವಸೂಲು ಮಾಡಬೌದಂತ ನಿರ್ಮಲಕ್ಕ ಪ್ಲಾನ್ ಮಾಡ್ಯಾರೆ’ ಎಂದೆ.</p>.<p>‘ಬಡವರು ತಿನ್ನೋ ಸಾದಾ ಪಾಪ್ಕಾರ್ನಿಗೆ 5% ಜಿಎಸ್ಟಿ, ಮಧ್ಯಮವರ್ಗದವರು ತಿನ್ನೋ ಉಪ್ಪು ಮಸಾಲೆ ಹಚ್ಚಿ ಪ್ಯಾಕ್ ಮಾಡಿದ್ದಕ್ಕೆ 12% ಜಿಎಸ್ಟಿ, ಮತ್ತೆ ರೊಕ್ಕ ಇದ್ದೋರು ತಿನ್ನೋ ಕ್ಯಾರಮಲ್ ಪಾಪ್ಕಾರ್ನಿಗೆ 18% ಜಿಎಸ್ಟಿ. ಅಂದ್ರ ಜೇಬಿಗೆ ತಕ್ಕ ಜಿಎಸ್ಟಿ’ ಎಂದು ಮರು ವಾದಿಸಿತು.</p>.<p>‘ಒಂದು ದೇಶ, ಎಲ್ಲಾ ಒಂದೇ ಇರಬಕು ಅನ್ನೋರು ತಿನ್ನುವ ಒಂದು ಐಟಮ್ಮಿಗೆ ಮೂರು ಥರದ ಜಿಎಸ್ಟಿ ಹಾಕೂದು ಯಾವ ನ್ಯಾಯ?’ ನಾನು ಪ್ರಶ್ನಿಸಿದೆ.</p>.<p>‘ವೈವಿಧ್ಯತೆಯ ದೇಶ ನಮ್ಮದು… ಹಂಗಾಗಿ ವೈವಿಧ್ಯತೆಯ ಜಿಎಸ್ಟಿ! ಆದ್ರೂ ವರ್ಷದ ಕೊನೆಗೆ ನಿರ್ಮಲಕ್ಕ ತೆರಿಗೆ ಮಿತಿ ಹೆಚ್ಚಳದ ನೆಮ್ಮದಿಯ ಸುದ್ದಿ ಕೊಟ್ಟಾಳೆ’ ಎಂದು ಮೀಸೆ ತಿರುವಿತು.</p>.<p>‘ಡಾಲರ್ ಎದ್ರು ನಮ್ಮ ರೂಪಾಯಿ ಕುಸಿದು ಪಾತಾಳ ಕಂಡೈತಿ. ಯಾವ ನೆಮ್ಮದಿಯ ಮಾತಾಡ್ತಿ?’</p>.<p>‘ನೀವು ಬಡವರು, ಮಧ್ಯಮವರ್ಗದವರು ಡಾಲರ್ ಕೊಳ್ಳಂಗಿಲ್ಲ! ನಿಮ್ಮ ವ್ಯಾಪಾರ ರೂಪಾಯಿವಳಗೆ ನಡೀತೈತೆ. ನಿಮಗ್ಯಾಕೆ ಚಿಂತೆ’ ಎಂದು ಬೆಕ್ಕಣ್ಣ ಹುಂಬವಾದ ಮುಂದಿಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>