ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ: ನಾಯಕರು ಏನಂತಾರೆ?

Last Updated 27 ಜನವರಿ 2022, 19:39 IST
ಅಕ್ಷರ ಗಾತ್ರ

ನಾನು ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ರಾಜಕೀಯ ಪ್ರವೇಶಿಸಿದ್ದೆ. ಅವರದ್ದೇ ಸಮುದಾಯದವರಾದ ಜಾಟರು ಬಿಜೆಪಿಯ ಮೇಲೆ ಸಿಟ್ಟಾಗಬಾರದು

- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ

***

ಇದೇ ಬಿಜೆಪಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯದೆ ರೈತರನ್ನು ಒಂದು ವರ್ಷ ಬೀದಿಯಲ್ಲಿ ಕೂರಿಸಿತ್ತು. ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. 700 ರೈತರು ಸತ್ತರು. ಆದರೆ ಈಗ ರೈತರ ಓಲೈಕೆಯ ಮಾತುಗಳನ್ನಾಡುತ್ತಿದೆ

- ಸಚಿನ್ ಪೈಲಟ್, ಕಾಂಗ್ರೆಸ್‌ ನಾಯಕ

***

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಎಸ್‌ಪಿ ಮತ್ತು ಬಿಎಸ್‌ಪಿಗಳು ಕೆಲವು ಜಾತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದವು. ಬಿಜೆಪಿಯು ಸಮಾಜದ ಎಲ್ಲರಿಗಾಗಿ ಕೆಲಸ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

***

ಬಿಜೆಪಿಯದ್ದು ಅತ್ಯಂತ ಸಂಕುಚಿತ ಮನೋಭಾವ. ಪದವೀಧರರು, ಉನ್ನತ ಶಿಕ್ಷಣ ಪಡೆದವರು ಪಕೋಡ ಮಾರಾಟ ಮಾಡಲಿ ಎಂದು ಬಿಜೆಪಿ ಬಯಸುತ್ತದೆ

- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

***

ಎಲ್ಲರನ್ನೂ ಒಳಗೊಳ್ಳುವ, ಸಹಿಷ್ಣುವಾದ, ಬಹುತ್ವನ್ನು ಒಪ್ಪಿಕೊಳ್ಳುವ ನಿಜವಾದ ಹಿಂದುತ್ವವನ್ನು ಟಿಎಂಸಿ ಪ್ರತಿಪಾದಿಸುತ್ತದೆ. ಹಿಂದುತ್ವದ ತಿರುಚಿದ ಸ್ವರೂಪವನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ದ್ವೇಷ, ಧರ್ಮಾಂಧತೆ, ವಿಭಜನೆ, ಹಿಂಸೆಗಾಗಿ ಧರ್ಮವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ

- ಪವನ್‌ ವರ್ಮಾ, ಟಿಎಂಸಿ ಉಪಾಧ್ಯಕ್ಷ

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT