ಕೇಂದ್ರ ಸರ್ಕಾರದ ಹಲವು ಜನಪರ ಕಾರ್ಯಕ್ರಮಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದ ಅಮಿತ್ ಶಾ, '2010ರಲ್ಲಿ ಬಂಗಾಳವು ತಾಯಿ, ತಾಯ್ನಾಡು ಮತ್ತು ಮನುಷ್ಯರ (2009ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರದ ಘೋಷ ವಾಕ್ಯ) ಮೂಲಕ ಪರಿವರ್ತನೆ ಕಂಡಿತು. ಆಗ ಬಂಗಾಳದಲ್ಲಿ ಭರವಸೆಗಳು ಹಾಗೂ ಅಪೇಕ್ಷೆಗಳಿದ್ದವು. ಆದರೆ ಈಗ ಜನರಲ್ಲಿ ಆಕ್ರೋಶವಿದೆ' ಎಂದು ಹೇಳಿದರು.