‘2002ರಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಆರು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಇರುವುದನ್ನು ದೃಢಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಹೀಗಾಗಿ ಮಹೇಂದ್ರ ನಾಯಕ್, ದೇವೇಂದ್ರ ಝಾಲಾ, ದೇವೇಂದ್ರ ನಾಯಕ್, ಭರತ್ ಗೋಹಿಲ್ ಹಾಗೂ ಸಾಜಿ ಮನ್ಸೂರಿ ಎಂಬುವರನ್ನು ದೋಷ ಮುಕ್ತಗೊಳಿಸಲಾಗುತ್ತಿದೆ. ಆರೋಪಿ ಅತುಲ್ ಶಾ ಎಂಬುವರು ವಿಚಾರಣೆ ಬಾಕಿ ಇರುವಾಗಲೇ ಮೃತಪಟ್ಟಿದ್ದರು. ಹೀಗಾಗಿ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಷ್ತಾಕ್ ಎ ಭಟ್ಟಿ ಶುಕ್ರವಾರ ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.