<p><strong>ಚೆನ್ನೈ:</strong> ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್) ಮತ್ತು ಒ.ಪನ್ನೀರ್ಸೆಲ್ವಂ (ಒಪಿಎಸ್) ನೇತೃತ್ವದಲ್ಲಿ ಇದ್ದ ದ್ವಿ ನಾಯಕತ್ವ ವ್ಯವಸ್ಥೆ ರದ್ದಾಗಿದೆ ಎಂದು ಪಕ್ಷದ ಮೇಲೆ ಪ್ರಾಬಲ್ಯ ಹೊಂದಿರುವ ಇಪಿಎಸ್ ಬಣ ಶುಕ್ರವಾರ ಪ್ರತಿಪಾದಿಸಿದೆ.</p>.<p>ಇಬ್ಬರ ನೇತೃತ್ವದಲ್ಲಿ ನಾಯಕತ್ವ ಹಂಚಿಕೆಗೆ ಸಂಬಂಧಿಸಿದ ಪಕ್ಷದ ಬೈಲಾಗೆ ಡಿಸೆಂಬರ್ 1, 2021ರಲ್ಲಿ ತರಲಾಗಿದ್ದ ತಿದ್ದುಪಡಿಯನ್ನು ಗುರುವಾರ ನಡೆದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ದ್ವಿನಾಯಕತ್ವ ವ್ಯವಸ್ಥೆ ರದ್ದಾಗಲಿ ದೆ ಎಂದೂ ಈ ಬಣ ಪ್ರತಿಪಾದಿಸಿದೆ.</p>.<p>ಪಕ್ಷದ ಸಾಮಾನ್ಯ ಸಭೆಯು ಪಕ್ಷದಲ್ಲಿ ಏಕ ನಾಯಕತ್ವ ವ್ಯವಸ್ಥೆಯೇ ಜಾರಿಯಲ್ಲಿ ಇರಬೇಕು ಎಂದು ಪ್ರತಿಪಾದಿಸಿದ ಹಿಂದೆಯೇ ಈ ಬೆಳವಣಿಗೆ ನಡೆದಿದೆ. ಬೈಲಾಗೆ ತಿದ್ದುಪಡಿಯಾದ ಬಳಿಕ ಒಪಿಎಸ್ ಮತ್ತು ಇಪಿಎಸ್ ಅವರು ಕ್ರಮವಾಗಿ ಸಂಯೋಜಕ ಮತ್ತು ಜಂಟಿ ಸಂಯೋಜಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.</p>.<p>ಪಕ್ಷದ ಈ ಉನ್ನತ ಸ್ಥಾನಗಳಿಗೆ ಸಂಬಂಧಿಸಿದ ಬೈಲಾ ತಿದ್ದುಪಡಿಯನ್ನು ಗುರುವಾರ ನಡೆದಿದ್ದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ಸಹಜವಾಗಿ ಉಲ್ಲೇಖಿತ ಎರಡೂ ಅಧಿಕಾರ ಸ್ಥಾನಗಳು ನಿಷ್ಕ್ರಿಯಗೊಳ್ಳಲಿವೆ. ಒಪಿಎಸ್ ಅವರು ಸಂಯೋಜಕರಾಗಿ ಇರುವುದಿಲ್ಲ. ಇಪಿಎಸ್ ಅವರು ಜಂಟಿ ಸಂಯೋಜಕರಾಗಿ ಉಳಿಯುವುದಿಲ್ಲ.</p>.<p>‘ಈ ಇಬ್ಬರು ತಮ್ಮ ಇತರೆ ಸ್ಥಾನಗಳಾದ ಖಜಾಂಚಿ (ಒಪಿಎಸ್) ಮತ್ತು ಕೇಂದ್ರ ಕಚೇರಿ ಕಾರ್ಯದರ್ಶಿ (ಇಪಿಎಸ್) ಆಗಿ ಮಾತ್ರವೇ ಮುಂದು ವರಿಯಲಿದ್ದಾರೆ’ ಎಂದು ಮಾಜಿ ಕಾನೂನು ಸಚಿವ ಷಣ್ಮುಗಂ ಅವರು<br />ಪ್ರತಿಪಾದಿಸಿದರು.</p>.<p>ಈ ಮೂಲಕ ಇಪಿಎಸ್ ಬಣವು ತಮ್ಮ ನಾಯಕನನ್ನು ಪಕ್ಷದ ಏಕ ನಾಯಕರಾಗಿ ಬಿಂಬಿಸಲು ಸಿದ್ಧತೆ ನಡೆಸಿರುವುದರ ಇಂಗಿತವನ್ನು ನೀಡಿದೆ. ಜುಲೈ 11ರಂದು ಮತ್ತೆ ನಡೆಯಲಿರುವ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಹಕ್ಕೊತ್ತಾಯ ಮಂಡಿಸುವ ಸಾಧ್ಯತೆ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್) ಮತ್ತು ಒ.ಪನ್ನೀರ್ಸೆಲ್ವಂ (ಒಪಿಎಸ್) ನೇತೃತ್ವದಲ್ಲಿ ಇದ್ದ ದ್ವಿ ನಾಯಕತ್ವ ವ್ಯವಸ್ಥೆ ರದ್ದಾಗಿದೆ ಎಂದು ಪಕ್ಷದ ಮೇಲೆ ಪ್ರಾಬಲ್ಯ ಹೊಂದಿರುವ ಇಪಿಎಸ್ ಬಣ ಶುಕ್ರವಾರ ಪ್ರತಿಪಾದಿಸಿದೆ.</p>.<p>ಇಬ್ಬರ ನೇತೃತ್ವದಲ್ಲಿ ನಾಯಕತ್ವ ಹಂಚಿಕೆಗೆ ಸಂಬಂಧಿಸಿದ ಪಕ್ಷದ ಬೈಲಾಗೆ ಡಿಸೆಂಬರ್ 1, 2021ರಲ್ಲಿ ತರಲಾಗಿದ್ದ ತಿದ್ದುಪಡಿಯನ್ನು ಗುರುವಾರ ನಡೆದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ದ್ವಿನಾಯಕತ್ವ ವ್ಯವಸ್ಥೆ ರದ್ದಾಗಲಿ ದೆ ಎಂದೂ ಈ ಬಣ ಪ್ರತಿಪಾದಿಸಿದೆ.</p>.<p>ಪಕ್ಷದ ಸಾಮಾನ್ಯ ಸಭೆಯು ಪಕ್ಷದಲ್ಲಿ ಏಕ ನಾಯಕತ್ವ ವ್ಯವಸ್ಥೆಯೇ ಜಾರಿಯಲ್ಲಿ ಇರಬೇಕು ಎಂದು ಪ್ರತಿಪಾದಿಸಿದ ಹಿಂದೆಯೇ ಈ ಬೆಳವಣಿಗೆ ನಡೆದಿದೆ. ಬೈಲಾಗೆ ತಿದ್ದುಪಡಿಯಾದ ಬಳಿಕ ಒಪಿಎಸ್ ಮತ್ತು ಇಪಿಎಸ್ ಅವರು ಕ್ರಮವಾಗಿ ಸಂಯೋಜಕ ಮತ್ತು ಜಂಟಿ ಸಂಯೋಜಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.</p>.<p>ಪಕ್ಷದ ಈ ಉನ್ನತ ಸ್ಥಾನಗಳಿಗೆ ಸಂಬಂಧಿಸಿದ ಬೈಲಾ ತಿದ್ದುಪಡಿಯನ್ನು ಗುರುವಾರ ನಡೆದಿದ್ದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ಸಹಜವಾಗಿ ಉಲ್ಲೇಖಿತ ಎರಡೂ ಅಧಿಕಾರ ಸ್ಥಾನಗಳು ನಿಷ್ಕ್ರಿಯಗೊಳ್ಳಲಿವೆ. ಒಪಿಎಸ್ ಅವರು ಸಂಯೋಜಕರಾಗಿ ಇರುವುದಿಲ್ಲ. ಇಪಿಎಸ್ ಅವರು ಜಂಟಿ ಸಂಯೋಜಕರಾಗಿ ಉಳಿಯುವುದಿಲ್ಲ.</p>.<p>‘ಈ ಇಬ್ಬರು ತಮ್ಮ ಇತರೆ ಸ್ಥಾನಗಳಾದ ಖಜಾಂಚಿ (ಒಪಿಎಸ್) ಮತ್ತು ಕೇಂದ್ರ ಕಚೇರಿ ಕಾರ್ಯದರ್ಶಿ (ಇಪಿಎಸ್) ಆಗಿ ಮಾತ್ರವೇ ಮುಂದು ವರಿಯಲಿದ್ದಾರೆ’ ಎಂದು ಮಾಜಿ ಕಾನೂನು ಸಚಿವ ಷಣ್ಮುಗಂ ಅವರು<br />ಪ್ರತಿಪಾದಿಸಿದರು.</p>.<p>ಈ ಮೂಲಕ ಇಪಿಎಸ್ ಬಣವು ತಮ್ಮ ನಾಯಕನನ್ನು ಪಕ್ಷದ ಏಕ ನಾಯಕರಾಗಿ ಬಿಂಬಿಸಲು ಸಿದ್ಧತೆ ನಡೆಸಿರುವುದರ ಇಂಗಿತವನ್ನು ನೀಡಿದೆ. ಜುಲೈ 11ರಂದು ಮತ್ತೆ ನಡೆಯಲಿರುವ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಹಕ್ಕೊತ್ತಾಯ ಮಂಡಿಸುವ ಸಾಧ್ಯತೆ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>