ಪಟ್ನಾ: ಕೆಲವು ದಿನಗಳ ಹಿಂದೆ ಗಂಗಾ ನದಿಯಲ್ಲಿ ಶವಗಳು ತೇಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋವಿಡ್-19 ಮಾಲಿನ್ಯ ಪರೀಕ್ಷೆ ಸಲುವಾಗಿ ನದಿನೀರಿನ ಮಾದರಿಯನ್ನುಸಂಗ್ರಹಿಸಲಾಗಿದೆ ಎಂದು ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ನವೀನ್ ಕುಮಾರ್ ತಿಳಿಸಿದ್ದಾರೆ.
ʼಗಂಗಾ ನದಿಯ ಮಾದರಿ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ʼಗಂಗಾʼ ನೀರಿನ ಗುಣಮಟ್ಟವನ್ನು ತಪಾಸಣೆ ಮಾಡುತ್ತಲೇ ಇರುತ್ತದೆ. ಆದರೆ, ನಿಮಗೆ ತಿಳಿದಿರುವಂತೆ ಇತ್ತೀಚೆಗೆ ನದಿಯಲ್ಲಿ ಶವಗಳು ತೇಲಿರುವುದು ವರದಿಯಾಗಿದೆ. ಹಾಗಾಗಿ ನದಿ ನೀರು ಕೊರೊನಾವೈರಸ್ನಿಂದ ಕಲುಷಿತಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನುಖಚಿತಪಡಿಸಲು ಈ ಪರೀಕ್ಷೆ ನಡೆಸುತ್ತಿದ್ದೇವೆʼ ಎಂದು ಅವರು ಹೇಳಿದ್ದಾರೆ.
ಜಲಶಕ್ತಿ ಸಚಿವಾಲಯದ ʼಗಂಗಾ ರಾಷ್ಟ್ರೀಯ ಮಿಷನ್ʼ ಮೂಲಕ ಈ ಪರೀಕ್ಷೆ ನಡೆಸಲಾಗುತ್ತಿದೆ. ಬಕ್ಸಾರ್,ಪಟ್ನಾ, ಭೋಜ್ಪುರ್, ಸರಾನ್ನಲ್ಲಿ ಮಾದರಿ ಸಂಗ್ರಹಿಸಲಾಗಿದೆ. ಅದನ್ನು ಲಖನೌನಲ್ಲಿರುವ ʼಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಕೌನ್ಸಿಲ್ʼನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ʼಕೇಂದ್ರದ ವಿಜ್ಞಾನಿಗಳ ತಂಡವು ಪರಿಶೀಲನೆ ಮತ್ತು ಮಾದರಿ ಸಂಗ್ರಹಿಸಿಕೊಳ್ಳುವ ಸಲುವಾಗಿ ಲಖನೌನಿಂದ ಇಲ್ಲಿಗೆ ಬಂದಿದೆ.ಆ ತಂಡವು ನದಿಯುಮಲಿನಗೊಂಡಿದೆಯೇ ಎಂಬುದನ್ನು ದೃಢಪಡಿಸಲುಶವಗಳು ತೇಲುತ್ತಿದ್ದ ಬಕ್ಸಾರ್ನಲ್ಲಿ ಜೂನ್ 1 ರಂದು ಮತ್ತು ಪಟ್ನಾ, ಭೋಜ್ಪುರ್, ಸರಾನ್ನಲ್ಲಿ ಜೂನ್ 5 ರಂದು ಮಾದರಿ ಸಂಗ್ರಹಿಸಿದೆ. ಸದ್ಯ ಮಾದರಿಯನ್ನು ಲಖನೌಗೆ ಕಳಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆʼ ಎಂದಿದ್ದಾರೆ.
ಇದನ್ನೂ ಓದಿ:ಆಳ–ಅಗಲ: ಗಂಗಾ ನದಿಯಲ್ಲಿ ತೇಲಿದ ಹೆಣಗಳು
ಶವ ತೇಲುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಸರ್ಕಾರವು, ಮೃತ ದೇಹಗಳನ್ನು ನದಿಗೆ ಎಸೆಯುವುದನ್ನು ತಡೆಯುವಂತೆ ಮತ್ತು ಗೌರವಯುತ ಅಂತ್ಯಕ್ರಿಯೆಗೆ ಏರ್ಪಾಡು ಮಾಡುವಂತೆ ಉತ್ತರ ಪ್ರದೇಶ ಹಾಗೂ ಬಿಹಾರ ಸರ್ಕಾರಗಳಿಗೆಮೇ17 ರಂದು ಸೂಚಿಸಿತ್ತು.
ರಾಜ್ಯ ಸರ್ಕಾರಗಳುಮೃತದೇಹಗಳ ಸುರಕ್ಷಿತ ವಿಲೇವಾರಿ ಮತ್ತು ನೀರಿನ ಗುಣಮಟ್ಟವನ್ನು ರಕ್ಷಿಸುವುದರತ್ತ ಗಮನಹರಿಸಬೇಕು ಎಂದು ಜಲಶಕ್ತಿ ಸಚಿವಾಲಯವು ತಿಳಿಸಿತ್ತು. ಜೊತೆಗೆಆರೋಗ್ಯ ಇಲಾಖೆಯ ಸಲಹೆ ಮೇರೆಗೆ ನಿಯಮಿತವಾಗಿ ನೀರಿನ ಗುಣಮಟ್ಟ ತಪಾಸಣೆ ಮಾಡಬೇಕು ಎಂದುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂನಿರ್ದೇಶಿಸಿತ್ತು.
ಶವ ತೇಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಜಲಶಕ್ತಿ ಸಚಿವಾಲಯ, ಉತ್ತರ ಪ್ರದೇಶ ಮತ್ತು ಬಿಹಾರಸರ್ಕಾರಗಳಿಗೆ ಮೇ 13ರಂದು ನೋಟಿಸ್ ನೀಡಿತ್ತು.
ಇವನ್ನೂ ಓದಿ
*ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು: ಕೋವಿಡ್ ಸೋಂಕಿತರದ್ದೆಂಬ ಶಂಕೆ
*ಬಿಹಾರ ಆಯ್ತು, ಈಗ ಉತ್ತರ ಪ್ರದೇಶದಲ್ಲೂ ಗಂಗಾ ನದಿಯಲ್ಲಿ ಶವಗಳು ಪತ್ತೆ
*ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ಮತ್ತೆ ತೇಲಿ ಬಂದ 7 ಶವಗಳು
*ಗಂಗೆಯಲ್ಲಿ ತೇಲಿಬಂದ ಹೆಣಗಳು: ವರದಿಗೆ ಎನ್ಎಚ್ಆರ್ಸಿ ಸೂಚನೆ
*ಗಂಗಾ ನದಿಯಲ್ಲಿ ತೇಲಿಬರುವ ಶವಗಳು: ಪಶ್ಚಿಮ ಬಂಗಾಳದಲ್ಲಿ ಮುನ್ನೆಚ್ಚರಿಕೆ
*ನದಿಗಳಲ್ಲಿ ತೇಲಿಬರುವ ಶವಗಳು: ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ
*ನದಿಗೆ ಶವ ಎಸೆತ ತಡೆಗೆ ರಾಜ್ಯಗಳಿಗೆ ಸೂಚನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.