‘ಮೇಲ್ಜಾತಿಯ ರೋಗಿ ಎಷ್ಟೇ ನಿಸ್ತೇಜವಾಗಿದ್ದರೂ ಬಲವಂತವಾಗಿ ಹೊರಗೆ ತರುತ್ತಿದ್ದರೇ ವಿನಾ ತಾಯಿಯನ್ನು ಒಳಗೆ ಬಿಡುತ್ತಿರಲಿಲ್ಲ. ಮೇಲ್ಜಾತಿಯ ಮಹಿಳೆಯರು, ಕೇರಿಯವರು ತೊಳೆದು ಕೊಡುತ್ತಿದ್ದ ಪಾತ್ರೆಗಳ ಮೇಲೆ ಮತ್ತೆ ನೀರು ಸುರಿದು ಒಳಗೆ ಇಡುತ್ತಿದ್ದುದೂ ಕಣ್ಣಿಗೆ ಕಟ್ಟಿದ ಹಾಗಿದೆ. ಇವೆಲ್ಲ ಪ್ರಸಂಗಗಳೇ ಪುಸ್ತಕ ಬರೆಯಲು ಪ್ರೇರಣೆ’ ಎಂದು; ಜೆಎನ್ಯುನಲ್ಲಿ ಕಲಿತು, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ಸುಮಿತ್ ಭಾವುಕರಾದರು.