‘ಸಮಾಜ ವಿಭಜಿಸಲು ಬಿಜೆಪಿ ನೇತೃತ್ವದ ಸರ್ಕಾರ, ಆರ್ಎಸ್ಎಸ್ ಮತ್ತು ಬಿಜೆಪಿ ಪಕ್ಷದ ನಾಯಕರು, ಕಾರ್ಯಕರ್ತರು ಮಾಡಿದ ಪ್ರಯತ್ನಗಳ ಫಲವೇ ‘ಭಾರತ್ ಜೋಡೊ’ ಯಾತ್ರೆ. ಅದಕ್ಕಾಗಿಯೇ ಈ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿ, ಸರ್ಕಾರದ ವೈಫಲ್ಯಗಳು, ಅದರಲ್ಲೂ ವಿಶೇಷವಾಗಿ ಹಣದುಬ್ಬರ, ನಿರುದ್ಯೋಗ ಸಮಸ್ಯೆಯನ್ನು ಜನತೆಗೆ ಮನದಟ್ಟು ಮಾಡಿಸಲು ರಾಹುಲ್ ಗಾಂಧಿ ನಿರ್ಧರಿಸಿದರು. ಯಾತ್ರೆಗೆ ಎಲ್ಲ ವರ್ಗ, ಎಲ್ಲ ವೃತ್ತಿ, ಎಲ್ಲ ವಯೋಮಾನದ ಜನರ ಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆಗೆ ಎಲ್ಲ ಸಮುದಾಯದ ಒಡನಾಟ ಲಭಿಸುತ್ತಿರುವುದು ಒಂದು ಬಹುದೊಡ್ಡ ಯಶಸ್ಸು’ ಎಂದರು.