ಪಟ್ನಾ: ದುಷ್ಕರ್ಮಿಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ಕಾರುಗಳ ಮೇಲೆ ಕಲ್ಲೆಸಿದಿರುವ ಘಟನೆ ಭಾನುವಾರ ನಡೆದಿದೆ.
ಕಲ್ಲೆಸೆತದ ಪರಿಣಾಮ ಬೆಂಗಾವಲು ಪಡೆಯ ಹಲವು ಕಾರುಗಳ ಗ್ಲಾಸುಗಳು ಪುಡಿಪುಡಿಯಾಗಿವೆ. ಘಟನೆ ನಡೆದ ವೇಳೆ ಬೆಂಗಾವಲು ಪಡೆಯ ಜೊತೆನಿತೀಶ್ ಕುಮಾರ್ ಅವರು ಇರಲಿಲ್ಲ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಪಟ್ನಾ ಜಿಲ್ಲೆಯ ಸೊಹಗಿ ಎಂಬಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತರು ಕೃತ್ಯ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲೆಸೆತಕ್ಕೆ ಕಾರಣ ತಿಳಿದು ಬಂದಿಲ್ಲ.