<p class="title"><strong>ವಿಶ್ವಸಂಸ್ಥೆ: </strong>ವಿಶ್ವಸಂಸ್ಥೆಯು ಇಂದು ಸಮಗ್ರವಾದ ಸುಧಾರಣಾ ಚಿಂತನೆಯಿಲ್ಲದೆ ‘ಆತ್ಮವಿಶ್ವಾಸದ ಬಿಕ್ಕಟ್ಟು’ ಎದುರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p class="title">ಪರಸ್ಪರ ಸಂಪರ್ಕವುಳ್ಳ ಈ ಜಗತ್ತು ಬಹುಪಕ್ಷೀಯ ಸುಧಾರಣೆ ಬಯಸಲಿದೆ. ಇಂಥ ಸುಧಾರಣೆಯು ಎಲ್ಲ ಭಾಗಿದಾರರಿಗೆ ಧ್ವನಿ ನೀಡಲಿದೆ ಎಂದರು. ಅವರು ಮಾನವ ಕಲ್ಯಾಣದ ಸಮಕಾಲೀನ ಸವಾಲುಗಳ ಕುರಿತು ಬೆಳಕು ಚೆಲ್ಲಿದರು.</p>.<p class="title">ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜನವರಿ 1, 2021ರಿಂದ ಜಾರಿಗೆ ಬರುವಂತೆ ಎರಡು ವರ್ಷದ ಸದಸ್ಯತ್ವ (ಶಾಶ್ವತವಲ್ಲದ) ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.</p>.<p class="title">ಹಳತಾದ ರಚನೆಗಳಿಂದನಾವು ಇಂದಿನ ಸವಾಲುಗಳನ್ನು ಎದುರಿಸಲು ಆಗದು ಎಂದು ಪ್ರಧಾನಿ ಹೇಳಿದರು.</p>.<p class="title">ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಉನ್ನತ ಮಟ್ಟದ ಸಭೆಗೆ ಅವರು ಈ ಕುರಿತು ವಿಡಿಯೊ ಸಂದೇಶ ರವಾನಿಸಿದ್ದಾರೆ.</p>.<p class="title">193 ಸದಸ್ಯತ್ವ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, ಭಯೋತ್ಪಾದನೆ ಹತ್ತಿಕ್ಕುವ, ಬಹುಪಕ್ಷೀಯ ಸುಧಾರಣೆಗೆ ಒತ್ತು ನೀಡುವ, ಸೇರ್ಪಡೆಯುಕ್ತ ಅಭಿವೃದ್ಧಿಗೆ ಆದ್ಯತೆ ನೀಡುವ ದೂರದೃಷ್ಟಿಯ ಚಿಂತನೆಗಳನ್ನು ಒಳಗೊಂಡ ನಿರ್ಣಯವನ್ನು ಅಂಗೀಕರಿಸಿತು. ಅಲ್ಲದೆ, ಕೋವಿಡ್-19 ಪಿಡುಗನ್ನು ಉತ್ತಮ ಸಿದ್ಧತೆಯೊಂದಿಗೆ ಎದುರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿತು.</p>.<p>ಇಂಥ ಘೋಷಣೆಯು ವಿಶ್ವಸಂಸ್ಥೆಯು ಸುಧಾರಣೆ ಆಗಬೇಕಾದ ಅಗತ್ಯವನ್ನು ಹೇಳಲಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಎಲ್ಲ ದೇಶಗಳ ಜೊತೆಗೆ ಒಗ್ಗೂಡಿ ಕಾರ್ಯನಿರ್ವಹಿಸಲು ಬಯಸಲಿದೆ ಎಂದು ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ವಿಶ್ವಸಂಸ್ಥೆ: </strong>ವಿಶ್ವಸಂಸ್ಥೆಯು ಇಂದು ಸಮಗ್ರವಾದ ಸುಧಾರಣಾ ಚಿಂತನೆಯಿಲ್ಲದೆ ‘ಆತ್ಮವಿಶ್ವಾಸದ ಬಿಕ್ಕಟ್ಟು’ ಎದುರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p class="title">ಪರಸ್ಪರ ಸಂಪರ್ಕವುಳ್ಳ ಈ ಜಗತ್ತು ಬಹುಪಕ್ಷೀಯ ಸುಧಾರಣೆ ಬಯಸಲಿದೆ. ಇಂಥ ಸುಧಾರಣೆಯು ಎಲ್ಲ ಭಾಗಿದಾರರಿಗೆ ಧ್ವನಿ ನೀಡಲಿದೆ ಎಂದರು. ಅವರು ಮಾನವ ಕಲ್ಯಾಣದ ಸಮಕಾಲೀನ ಸವಾಲುಗಳ ಕುರಿತು ಬೆಳಕು ಚೆಲ್ಲಿದರು.</p>.<p class="title">ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜನವರಿ 1, 2021ರಿಂದ ಜಾರಿಗೆ ಬರುವಂತೆ ಎರಡು ವರ್ಷದ ಸದಸ್ಯತ್ವ (ಶಾಶ್ವತವಲ್ಲದ) ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.</p>.<p class="title">ಹಳತಾದ ರಚನೆಗಳಿಂದನಾವು ಇಂದಿನ ಸವಾಲುಗಳನ್ನು ಎದುರಿಸಲು ಆಗದು ಎಂದು ಪ್ರಧಾನಿ ಹೇಳಿದರು.</p>.<p class="title">ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಉನ್ನತ ಮಟ್ಟದ ಸಭೆಗೆ ಅವರು ಈ ಕುರಿತು ವಿಡಿಯೊ ಸಂದೇಶ ರವಾನಿಸಿದ್ದಾರೆ.</p>.<p class="title">193 ಸದಸ್ಯತ್ವ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, ಭಯೋತ್ಪಾದನೆ ಹತ್ತಿಕ್ಕುವ, ಬಹುಪಕ್ಷೀಯ ಸುಧಾರಣೆಗೆ ಒತ್ತು ನೀಡುವ, ಸೇರ್ಪಡೆಯುಕ್ತ ಅಭಿವೃದ್ಧಿಗೆ ಆದ್ಯತೆ ನೀಡುವ ದೂರದೃಷ್ಟಿಯ ಚಿಂತನೆಗಳನ್ನು ಒಳಗೊಂಡ ನಿರ್ಣಯವನ್ನು ಅಂಗೀಕರಿಸಿತು. ಅಲ್ಲದೆ, ಕೋವಿಡ್-19 ಪಿಡುಗನ್ನು ಉತ್ತಮ ಸಿದ್ಧತೆಯೊಂದಿಗೆ ಎದುರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿತು.</p>.<p>ಇಂಥ ಘೋಷಣೆಯು ವಿಶ್ವಸಂಸ್ಥೆಯು ಸುಧಾರಣೆ ಆಗಬೇಕಾದ ಅಗತ್ಯವನ್ನು ಹೇಳಲಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಎಲ್ಲ ದೇಶಗಳ ಜೊತೆಗೆ ಒಗ್ಗೂಡಿ ಕಾರ್ಯನಿರ್ವಹಿಸಲು ಬಯಸಲಿದೆ ಎಂದು ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>