‘ಶಾಸಕರ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಮುಖ್ಯಮಂತ್ರಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಹಿರಿಯರು, ಕಿರಿಯರ ಸಮತೋಲನ ಸಂಪುಟ ರಚಿಸಿದ್ದಾರೆ. ತಮಗೆ ಮತ್ತೆ ಗ್ರಾಮೀಣಾಭಿವೃದ್ಧಿ ಖಾತೆ ದೊರೆತಿರುವುದು ಸಂತಸ ತಂದಿದೆ. ಆರಗ ಗೃಹ ಸಚಿವರಾಗಿರುವುದು ಜಿಲ್ಲೆಗೆ ಬಲ ತಂದಿದೆ. ಅವಕಾಶವನ್ನು ಎಲ್ಲ ಸಚಿವರೂ ಜನರ ಸೇವೆಗೆ ಬಳಸಿಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.