‘ನಾಡಗೀತೆಗೆ ಅವಮಾನ ಮಾಡುವುದೆಂದರೆ ನಾಡಿನ ಸರ್ವರಿಗೆ ಮತ್ತು ಸರ್ಕಾರಕ್ಕೆ ಮಾಡುವ ಅವಮಾನ. ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕುವೆಂಪು ಅಭಿಮಾನಿಗಳು, ಸಾಹಿತಿಗಳು ಬೀದಿಗಳಿದು ಹೋರಾಟ ಮಾಡಲಿದ್ದಾರೆ. ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.