ಜಿಂದಾಲ್, ಎನ್ಎಂಡಿಸಿ, ಸ್ಮಯೊರ್, ಕೆಎಸ್ಎಂಸಿಎಲ್ ಹೊರತು ಪಡಿಸಿದರೆ ಹೆಚ್ಚಿನ ಕಂಪನಿಯವರು ಕನ್ವೇಯರ್ ಬೆಲ್ಟ್ ಅಳವಡಿಸಿಕೊಂಡಿಲ್ಲ. ಈ ಹಿಂದಿನಂತೆಯೇ ಅದಿರು ಲಾರಿಗಳ ಓಡಾಟ ಸಾಮಾನ್ಯವಾಗಿದೆ. ಚಳಿಗಾಲ, ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಿದ್ದರೆ, ಮಳೆಗಾಲದಲ್ಲಿ ರಸ್ತೆಗಳೆಲ್ಲ ಹೊಂಡಗಳಾಗಿ ಬದಲಾಗುತ್ತವೆ. ದೂಳಿನಿಂದ ಸುತ್ತಮುತ್ತಲಿನ ಪರಿಸರ, ರಸ್ತೆಗಳು ಸದಾ ಕೆಂಪಾಗಿರುತ್ತವೆ. ಜನರು ಸದಾ ಮೂಗು, ಬಾಯಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.