ಕೊಂಕಣ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತ ಅವರು ಗೃಹ ಸಚಿವರನ್ನು ಭೇಟಿಮಾಡಿ, ತಾಳಗುಪ್ಪ– ಹೊನ್ನಾವರ ರೈಲು ಮಾರ್ಗದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡರು. ಹೊಸ ರೈಲು ಮಾರ್ಗದ ಸಮೀಕ್ಷೆ ಮಗಿದಿದ್ದು, ಯೋಜನೆ ಅನುಷ್ಠಾನವಾದರೆ ಶಿವಮೊಗ್ಗ ಜಿಲ್ಲೆಯು ಕೊಂಕಣ ರೈಲ್ವೆ ಜಾಲಕ್ಕೆ ಸೇರುತ್ತದೆ ಎಂಬ ವಿಷಯವನ್ನು ಸಚಿವರಿಗೆ ತಿಳಿಸಿದರು.