ಕೆಲವು ದಿನಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶ್ರೀನಿವಾಸಗೌಡ, ‘ಕೋಲಾರ ಜಿಲ್ಲೆಗೆ ಕೆ.ಸಿ. ವ್ಯಾಲಿ ನೀರು ತಂದು ರಮೇಶ್ ಕುಮಾರ್ ಮರೆಯಲಾರದಂಥ ಕೆಲಸ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅದನ್ನು ಕೊಳಚೆ ನೀರು ಎಂದು ಹೇಳಿರುವುದು ಸರಿಯಲ್ಲ. ಬರಡು ಭೂಮಿ ಎನಿಸಿಕೊಂಡಿರುವ ಕೋಲಾರಕ್ಕೆ ಕೆ. ಸಿ. ವ್ಯಾಲಿ ನೀರು ಬಹಳ ಮುಖ್ಯವಾಗಿದೆ. ಯೋಜನೆ ನೀರನ್ನು ನಾನೂ ಕುಡಿದಿದ್ದೇನೆ. ನಾನೇನು ಸತ್ತು ಹೋಗಿದ್ದೆನೆಯೇ’ಎಂದು ಪ್ರಶ್ನಿಸಿದ್ದರು.