<p><strong>ಬೆಂಗಳೂರು</strong>: ಅಕಾಲಿಕವಾಗಿ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಕಣ್ಣು ನಾಲ್ವರಿಗೆ ಜಗದ ಬೆಳಕು ತೋರಿದೆ. ಸಾವಿನ ಬಳಿಕ ಮಣ್ಣಿನಲ್ಲಿ ಮಣ್ಣಾಗಲಿದ್ದ ಕಣ್ಣನ್ನು ಪುನೀತ್ ಕುಟುಂಬ ದಾನ ಮಾಡಿದ್ದರಿಂದಾಗಿ, ನಾಲ್ವರ ಬಾಳಿನಲ್ಲಿ ಇಲ್ಲಿಯವರೆಗಿದ್ದ ಅಂಧಕಾರ ದೂರವಾಗಿ ಹೊರಜಗತ್ತನ್ನು ನೋಡುವ ಸೌಭಾಗ್ಯ ದೊರಕಿದೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಅವರು, ‘ಪುನೀತ್ ಅವರಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪ<br />ಡಿಸುವ (ಸೀಳುವ) ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ. ಇದರಿಂದ ನಾಲ್ವರಿಗೆ ದೃಷ್ಟಿ ಬಂದಿದೆ’ ಎಂದರು.</p>.<p>‘ಕಣ್ಣಿನ ಮೇಲ್ಪದರದ ಕಾರ್ನಿ ಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಪದರದ ಕಾಯಿಲೆ ಇರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳ ದೃಷ್ಟಿಯನ್ನು ಸೃಜಿಸಲು ನಾವು<br />ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ಮಾಡಿದ್ದೇವೆ. ಈ ರೀತಿ ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು’ ಎಂದು ಅವರು ತಿಳಿಸಿದರು.</p>.<p class="Subhead"><strong>ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿಯ ಹೇಗೆ:</strong></p>.<p>*ಡೀಪ್ ಆಂಟೀರಿಯರ್ ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿ (DALK) - ಕಾರ್ನಿಯಾದ ಹೊರ ಅಥವಾ ಬಾಹ್ಯ ಭಾಗವನ್ನು ಕಾರ್ನಿಯಲ್ ಡಿಸ್ಟ್ರೋಫಿ ಮತ್ತು ಕೆರಾಟೋಕೊನಸ್ ಹೊಂದಿರುವ ಇಬ್ಬರು ಯುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಇವು ಕಾರ್ನಿಯಾದ ಮೇಲ್ಮೈ ಪದರದ ಮೇಲೆ ಪರಿಣಾಮ ಬೀರುತ್ತವೆ. ಅವರ ಕಣ್ಣಿನ ಆಳದ ಭಾಗವು ಸಾಮಾನ್ಯವಾಗಿತ್ತು. ಹೀಗಾಗಿ, ಮೇಲಿನ ಭಾಗವನ್ನು ಮಾತ್ರ ಬದಲಾಯಿಸಲಾಯಿತು ಮತ್ತು ರೋಗಿಯ ಎಂಡೋಥೀಲಿಯಂ ಅನ್ನು ಉಳಿಸಿಕೊಳ್ಳಲಾಗಿದೆ.</p>.<p>*ಡೆಸ್ಸೆಮೆಟ್ನ ಸ್ಟ್ರಿಪ್ಪಿಂಗ್ ಎಂಡೋಥೆಲಿಯಲ್ ಕೆರಾಟೊಪ್ಲ್ಯಾಸ್ಟಿ (DSEK) - ಕಾರ್ನಿಯಾದ ಒಳ ಅಥವಾ ಆಳವಾದ ಪದರವನ್ನು ಕಾರ್ನಿಯಾದ ಒಳಗಿನ ಪದರದ ಮೇಲೆ ಪರಿಣಾಮ ಬೀರುವ ಕಾರ್ನಿಯಲ್ ಎಂಡೋಥೀಲಿಯಲ್ ಡಿಕಂಪೆನ್ಸೇಶನ್ ಹೊಂದಿರುವ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಗುತ್ತದೆ.</p>.<p>ಈ ಕಾರ್ಯವಿಧಾನದಲ್ಲಿ, ಎಂಡೋಥೀಲಿಯಂ ಅನ್ನು ಮಾತ್ರ ಬದಲಾಯಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಸಣ್ಣ ಛೇದನ ಮಾಡಿ ಬಳಿಕ ಹೊಲಿಯಲಾಗುತ್ತದೆ. ಕಾರ್ನಿಯಾವನ್ನು ಪೂರ್ಣ ಪ್ರಮಾಣದಲ್ಲಿ ಕಸಿ ಮಾಡುವ ಅಗತ್ಯವಿರುವುದಿಲ್ಲ. ಇದರಿಂದ ರೋಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯ.</p>.<p>ಕಸಿ ಮಾಡಲು ಬಳಸದ ಲಿಂಬಲ್ ರಿಮ್ (ಕಾರ್ನಿಯಾದ ಸುತ್ತಳತೆಯ ಬಳಿ ಕಣ್ಣಿನ ಬಿಳಿ ಭಾಗ) ಅನ್ನು ಲಿಂಬಾಲ್ ಸ್ಟೆಮ್ ಸೆಲ್ ಹೊಂದಿರುವ ರೋಗಿಗಳಲ್ಲಿ ಬಳಕೆಗಾಗಿ ‘ಇಂಡ್ಯೂಸ್ಡ್ ಪ್ಲುರಿಪೊಟೆಂಟ್ ಸ್ಟೆಮ್ ಸೆಲ್’ಗಳನ್ನು ಉತ್ಪಾದಿಸಲು ನಮ್ಮ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಸಾಯನಿಕ ಗಾಯಗಳು ಆಸಿಡ್ ಗಾಯಗಳು ಮತ್ತು ಇತರ ಗಂಭೀರ ಸಮಸ್ಯೆಗಳ ಸಂದರ್ಭ ಇದನ್ನು ಬಳಕೆ ಮಾಡಲು ಸಾಧ್ಯವಿದೆ ಎಂದೂ ಭುಜಂಗಶೆಟ್ಟಿ ವಿವರಿಸಿದರು.</p>.<p>ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ.ಯತೀಶ್ ಶಿವಣ್ಣ, ಡಾ.ಶರೋನ್ ಡಿಸೋಜಾ, ಪ್ರಾರ್ಥನಾ ಭಂಡಾರಿ ಮತ್ತು ಡಾ.ಹರ್ಷ ನಾಗರಾಜ್ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಕಾರ್ನಿಯಾ ತಂಡದ ಡಾ.ಗೈರಿಕ್ ಕುಂದು ಮತ್ತುವೀರೇಶ್ ನೆರವು ನೀಡಿದ್ದಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಕಾಲಿಕವಾಗಿ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಕಣ್ಣು ನಾಲ್ವರಿಗೆ ಜಗದ ಬೆಳಕು ತೋರಿದೆ. ಸಾವಿನ ಬಳಿಕ ಮಣ್ಣಿನಲ್ಲಿ ಮಣ್ಣಾಗಲಿದ್ದ ಕಣ್ಣನ್ನು ಪುನೀತ್ ಕುಟುಂಬ ದಾನ ಮಾಡಿದ್ದರಿಂದಾಗಿ, ನಾಲ್ವರ ಬಾಳಿನಲ್ಲಿ ಇಲ್ಲಿಯವರೆಗಿದ್ದ ಅಂಧಕಾರ ದೂರವಾಗಿ ಹೊರಜಗತ್ತನ್ನು ನೋಡುವ ಸೌಭಾಗ್ಯ ದೊರಕಿದೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಅವರು, ‘ಪುನೀತ್ ಅವರಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪ<br />ಡಿಸುವ (ಸೀಳುವ) ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ. ಇದರಿಂದ ನಾಲ್ವರಿಗೆ ದೃಷ್ಟಿ ಬಂದಿದೆ’ ಎಂದರು.</p>.<p>‘ಕಣ್ಣಿನ ಮೇಲ್ಪದರದ ಕಾರ್ನಿ ಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಪದರದ ಕಾಯಿಲೆ ಇರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳ ದೃಷ್ಟಿಯನ್ನು ಸೃಜಿಸಲು ನಾವು<br />ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ಮಾಡಿದ್ದೇವೆ. ಈ ರೀತಿ ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು’ ಎಂದು ಅವರು ತಿಳಿಸಿದರು.</p>.<p class="Subhead"><strong>ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿಯ ಹೇಗೆ:</strong></p>.<p>*ಡೀಪ್ ಆಂಟೀರಿಯರ್ ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿ (DALK) - ಕಾರ್ನಿಯಾದ ಹೊರ ಅಥವಾ ಬಾಹ್ಯ ಭಾಗವನ್ನು ಕಾರ್ನಿಯಲ್ ಡಿಸ್ಟ್ರೋಫಿ ಮತ್ತು ಕೆರಾಟೋಕೊನಸ್ ಹೊಂದಿರುವ ಇಬ್ಬರು ಯುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಇವು ಕಾರ್ನಿಯಾದ ಮೇಲ್ಮೈ ಪದರದ ಮೇಲೆ ಪರಿಣಾಮ ಬೀರುತ್ತವೆ. ಅವರ ಕಣ್ಣಿನ ಆಳದ ಭಾಗವು ಸಾಮಾನ್ಯವಾಗಿತ್ತು. ಹೀಗಾಗಿ, ಮೇಲಿನ ಭಾಗವನ್ನು ಮಾತ್ರ ಬದಲಾಯಿಸಲಾಯಿತು ಮತ್ತು ರೋಗಿಯ ಎಂಡೋಥೀಲಿಯಂ ಅನ್ನು ಉಳಿಸಿಕೊಳ್ಳಲಾಗಿದೆ.</p>.<p>*ಡೆಸ್ಸೆಮೆಟ್ನ ಸ್ಟ್ರಿಪ್ಪಿಂಗ್ ಎಂಡೋಥೆಲಿಯಲ್ ಕೆರಾಟೊಪ್ಲ್ಯಾಸ್ಟಿ (DSEK) - ಕಾರ್ನಿಯಾದ ಒಳ ಅಥವಾ ಆಳವಾದ ಪದರವನ್ನು ಕಾರ್ನಿಯಾದ ಒಳಗಿನ ಪದರದ ಮೇಲೆ ಪರಿಣಾಮ ಬೀರುವ ಕಾರ್ನಿಯಲ್ ಎಂಡೋಥೀಲಿಯಲ್ ಡಿಕಂಪೆನ್ಸೇಶನ್ ಹೊಂದಿರುವ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಗುತ್ತದೆ.</p>.<p>ಈ ಕಾರ್ಯವಿಧಾನದಲ್ಲಿ, ಎಂಡೋಥೀಲಿಯಂ ಅನ್ನು ಮಾತ್ರ ಬದಲಾಯಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಸಣ್ಣ ಛೇದನ ಮಾಡಿ ಬಳಿಕ ಹೊಲಿಯಲಾಗುತ್ತದೆ. ಕಾರ್ನಿಯಾವನ್ನು ಪೂರ್ಣ ಪ್ರಮಾಣದಲ್ಲಿ ಕಸಿ ಮಾಡುವ ಅಗತ್ಯವಿರುವುದಿಲ್ಲ. ಇದರಿಂದ ರೋಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯ.</p>.<p>ಕಸಿ ಮಾಡಲು ಬಳಸದ ಲಿಂಬಲ್ ರಿಮ್ (ಕಾರ್ನಿಯಾದ ಸುತ್ತಳತೆಯ ಬಳಿ ಕಣ್ಣಿನ ಬಿಳಿ ಭಾಗ) ಅನ್ನು ಲಿಂಬಾಲ್ ಸ್ಟೆಮ್ ಸೆಲ್ ಹೊಂದಿರುವ ರೋಗಿಗಳಲ್ಲಿ ಬಳಕೆಗಾಗಿ ‘ಇಂಡ್ಯೂಸ್ಡ್ ಪ್ಲುರಿಪೊಟೆಂಟ್ ಸ್ಟೆಮ್ ಸೆಲ್’ಗಳನ್ನು ಉತ್ಪಾದಿಸಲು ನಮ್ಮ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಸಾಯನಿಕ ಗಾಯಗಳು ಆಸಿಡ್ ಗಾಯಗಳು ಮತ್ತು ಇತರ ಗಂಭೀರ ಸಮಸ್ಯೆಗಳ ಸಂದರ್ಭ ಇದನ್ನು ಬಳಕೆ ಮಾಡಲು ಸಾಧ್ಯವಿದೆ ಎಂದೂ ಭುಜಂಗಶೆಟ್ಟಿ ವಿವರಿಸಿದರು.</p>.<p>ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ.ಯತೀಶ್ ಶಿವಣ್ಣ, ಡಾ.ಶರೋನ್ ಡಿಸೋಜಾ, ಪ್ರಾರ್ಥನಾ ಭಂಡಾರಿ ಮತ್ತು ಡಾ.ಹರ್ಷ ನಾಗರಾಜ್ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಕಾರ್ನಿಯಾ ತಂಡದ ಡಾ.ಗೈರಿಕ್ ಕುಂದು ಮತ್ತುವೀರೇಶ್ ನೆರವು ನೀಡಿದ್ದಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>