‘ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ 12 ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ, ಅವರು ಆಡಳಿತ ನಡೆಸಿದ್ದು ಸ್ಟಾರ್ ಹೋಟೆಲ್ನಿಂದ. ಅದೇ ಅವರ ಕೇಂದ್ರ ಸ್ಥಾನವಾಗಿತ್ತು. ಯಾವ ಶಾಸಕ ಹಾಗೂ ಸಚಿವರ ಕೈಗೂ ಸಿಗಲಿಲ್ಲ ಆ ಆಸಾಮಿ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿಅನುದಾನ ಕೊಟ್ಟೆ ಎನ್ನುತ್ತಾರಲ್ಲಾ ಅವರೇನು ಅವರ ಮನೆಯಿಂದ ಕೊಟ್ಟಿದ್ದರಾ? ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಕೊಟ್ಟಿದ್ದೆ. ಅದು ಜನರ ತೆರಿಗೆಯ ಹಣ’ ಎಂದು ತಿರುಗೇಟು ನೀಡಿದರು.